Webdunia - Bharat's app for daily news and videos

Install App

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿರುವ ಕನ್ನಡಿಗರು ಇವರೇ

Krishnaveni K
ಗುರುವಾರ, 25 ಜುಲೈ 2024 (10:24 IST)
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಗೆ ನಾಳೆಯಿಂದ ಅಧಿಕೃತವಾಗಿ ಚಾಲನೆ ಸಿಗಲಿದೆ. ಈ ಬಾರಿ ಭಾರತದಿಂದ 117 ಅಥ್ಲೆಟ್ ಗಳು ಒಲಿಂಪಿಕ್ಸ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಆ ಪೈಕಿ ಕನ್ನಡಿಗರು ಯಾರು, ಯಾವ ಸ್ಪರ್ಧೆಯಲ್ಲಿದ್ದಾರೆ ಎಂದು ನೋಡಿ.

ಕರ್ನಾಟಕದಿಂದ ಈ ಬಾರಿ 9 ಅಥ್ಲೆಟ್ ಗಳು ಒಲಿಂಪಿಕ್ಸ್ ಕಣದಲ್ಲಿದ್ದಾರೆ. ಗಾಲ್ಫ್, ಬ್ಯಾಡ್ಮಿಂಟನ್, ಈಜು, ಟೆನಿಸ್, ರಿಲೇ ಮುಂತಾದ ವಿಭಾಗಗಳಲ್ಲಿ ಕರ್ನಾಟಕದ ಸ್ಪರ್ಧಿಗಳು ಭಾಗಿಯಾಗುತ್ತಿದ್ದಾರೆ. ಬ್ಯಾಡ್ಮಿಂಟನ್ ನಲ್ಲಿ ಅಶ್ವಿನಿ ಪೊನ್ನಪ್ಪ, ಟೆನಿಸ್ ನಲ್ಲಿ ರೋಹನ್ ಬೋಪಣ್ಣ, ರಿಲೇ ಪುರುಷರ ವಿಭಾಗದಲ್ಲಿ ಮಿಜೋ ಚಾಕೋ, ಬಾಕ್ಸಿಂಗ್ ನಲ್ಲಿ ನಿಶಾಂತ್ ದೇವ್, ಮಹಿಳೆಯರ ರಿಲೇಯಲ್ಲಿ ಪೂವಮ್ಮ, ಗಾಲ್ಫ್ ನಲ್ಲಿ ಅದಿತಿ ಅಶೋಕ್, ಈಜಿನಲ್ಲಿ ಧಿನಿಧಿ ದೇಸಿಂಗೊ, ಶ್ರೀಹರಿ ನಟರಾಜ್, ಟಿಟಿಯಲ್ಲಿ ಅರ್ಚನಾ ಕಾಮತ್ ಈ ಬಾರಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಕರ್ನಾಟಕದ ಮೂಲದವರಾಗಿದ್ದಾರೆ.

ಈ ಪೈಕಿ ಅದಿತಿ ಅಶೋಕ್ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, ಅಶ್ವಿನಿ ಪೊನ್ನಪ್ಪ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 2 ಚಿನ್ನ, 3 ಬೆಳ್ಳಿ, 1 ಕಂಚು, ದಿನಿಧಿ 200 ಮೀ. ರಾಷ್ಟ್ರೀಯ ದಾಖಲೆ, ಎಂ ಆರ್ ಪೂವಮ್ಮ ಏಷ್ಯನ್ ಗೇಮ್ಸ್ ನಲ್ಲಿ 3 ಚಿನ್ನ, ಅರ್ಚನಾ ಕಾಮತ್ ನ್ಯಾಷನಲ್ ಗೇಮ್ಸ್ ನಲ್ಲಿ ಚಿನ್ನ, ಶ್ರೀಹರಿ ನಟರಾಜ್ ದಕ್ಷಿಣ ಏಷ್ಯಾ ಕ್ರೀಡಾ ಕೂಟದಲ್ಲಿ 4 ಚಿನ್ನ, ರೋಹಿತ್ ಬೋಪಣ್ಣ ಫ್ರೆಂಚ್ ಓಪನ್ ಚಾಂಪಿಯನ್, ನಿಶಾಂತ್ ದೇವವ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚು, ಮಿಜೋ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದವರಾಗಿದ್ದಾರೆ.

ಈ ಬಾರಿ ಕರ್ನಾಟಕದಿಂದ ಸ್ಪರ್ಧಿಸುತ್ತಿರುವವರಲ್ಲಿ ಈಜು ಸ್ಪರ್ಧಿ ಧಿನಿಧಿ ಕೇವಲ 14 ವರ್ಷದವರು. ಉಳಿದಂತೆ ರೋಹನ್ ಬೋಪಣ್ಣ, ಅಶ್ವಿನಿ ಪೊನ್ನಪ್ಪ, ಪೂವಮ್ಮ ಅನುಭವಿ ಕ್ರೀಡಾಳುಗಳು. ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೆ ಗೆದ್ದು ದೇಶಕ್ಕೆ ಮತ್ತು ರಾಜ್ಯಕ್ಕೆ ಹೆಮ್ಮೆ ತರಲಿ ಎಂಬುದೇ ನಮ್ಮ ಹಾರೈಕೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಎಷ್ಟು ಚೆಂದ ಕನ್ನಡ ಮಾತಾಡ್ತಾರೆ ನೋಡಿ

ಬಾಯ್ಕಾಟ್ ಎನ್ನುತ್ತಿದ್ದರೂ ಭಾರತ ಪಾಕಿಸ್ತಾನ ಮ್ಯಾಚ್ ಟಿಕೆಟ್ ಗೆ ಭರ್ಜರಿ ಬೆಲೆ

Asia Cup Cricket: ಯುಎಇ ನೀಡಿದ ಗುರಿಯನ್ನು ನಾಲ್ಕೇ ಓವರ್ ಗಳಲ್ಲಿ ಚಚ್ಚಿದ ಬಿಸಾಕಿದ ಟೀಂ ಇಂಡಿಯಾ

ಕ್ರಿಕೆಟಿಗ ಪೃಥ್ವಿ ಶಾಗೆ ಕೋರ್ಟ್‌ನಿಂದ ಬಿತ್ತು ₹100ದಂಡ, ಪ್ರಕರಣ ಹಿನ್ನೆಲೆ ಏನ್‌ ಗೊತ್ತಾ

Asia cup cricket: ದುಬೈನಲ್ಲಿ ಟಾಸ್ ಗೆದ್ದರೆ ಭಾರತ ಮೊದಲು ಏನು ಮಾಡಬೇಕು

ಮುಂದಿನ ಸುದ್ದಿ
Show comments