ಸಿಖ್ ಧರ್ಮೀಯರ ಆರನೇ ಗುರುವಾದ ಗುರು ಹರ್ ಗೋವಿಂದ ಅವರು ಸಿಖ್ ಧರ್ಮೀಯರ ಐದನೇ ಗುರುವಾದ ಗುರು ಅರ್ಜುನ್ದೇವ್ ಅವರ ಪುತ್ರರು.
ಇವರನ್ನು ಯೋಧ ಸಂತರೆಂದು ಕರೆಯುತ್ತಾರೆ. ಗುರು ಹರ್ ಗೋವಿಂದ ಅವರು ಚಿಕ್ಕದಾದ ಸೈನ್ಯವನ್ನು ಕಟ್ಟಿ ಅಹಿಂಸೆ ಮತ್ತು ಶಾಂತಿವಾದದಿಂದ ಜೀವನ ಸಾಗಿಸಬೇಕು ಎಂದು ಉಪದೇಶ ನೀಡಿದರು.ಬಡವ ಬಲ್ಲಿದರ ಮೇಲೆ ಹಿಂಸಾಶಕ್ತಿಗಳು ದಾಳಿ ನೆಡಸಿದಾಗ ಅವಶ್ಯವಾದರೇ ಕತ್ತಿಯನ್ನು ಹಿರಿಯಬೇಕು ಎಂದರು.
ಧರ್ಮ ಶೃದ್ದೆಯನ್ನು ಉಳಿಸಲು ಶಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕೆಂದು ಉಪದೇಶ ನೀಡಿದವರಲ್ಲಿ ಪ್ರಥಮ ಗುರುವಾಗಿದ್ದಾರೆ.ತಮ್ಮ 13ನೇಯ ವಯಸ್ಸಿನಲ್ಲಿ ಗುರು ಹರ್ ಗೋವಿಂದಜೀಯವರು ನೆಲದಿಂದ 10 ಅಡಿ ಎತ್ತರದಲ್ಲಿರುವ ಅಕಾಲ್ ತಕ್ತ್ ನಿರ್ಮಾಣ ಮಾಡಿ ಎರಡು ಬದಿಗೆ ಲೌಕಿಕ ಮತ್ತು ಅಧ್ಯಾತ್ಮಿಕತೆಯನ್ನು ಸಾರುವ ಕತ್ತಿಗಳಾದ ಮಿರಿ ಮತ್ತು ಪಿರಿಗಳನ್ನು ಅಳವಡಿಸಿದರು.