|
ಬಟಾ ಬಯಲಾದ ಪಾಕಿಸ್ತಾನ
ದೇಶದ ಹೆಗ್ಗುರುತಾಗಿದ್ದ ಮುಂಬಯಿ ತಾಜ್ ಹೋಟೆಲ್, ಒಬೆರಾಯ್ ಟ್ರೈಡೆಂಟ್, ಮತ್ತು ನಾರಿಮನ್ ಹೌಸ್ಗಳಲ್ಲಿ ಪಾಕಿಸ್ತಾನದಿಂದ ಬಂದ ಉಗ್ರರು ದಾಂಧಲೆ ಎಬ್ಬಿಸಿ ಸುಮಾರು 180ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡರು. ಒಬ್ಬ ಉಗ್ರಗಾಮಿ -ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫರೀದ್ಕೋಟ್ ಪ್ರದೇಶದ ಅಜ್ಮಲ್ ಅಮೀರ್ ಕಸಬ್ - ಸಿಕ್ಕಿಬಿದ್ದ. ಅವನೀಗ ಭಾರತ-ಪಾಕಿಸ್ತಾನ ನಡುವಣ ಸಂಬಂಧದ ಬಲವಾದ ಕೊಂಡಿಯಾಗಿ ಮಾರ್ಪಟ್ಟಿದ್ದಾನೆ. ಅವನು ಬಾಯಿಬಿಡುತ್ತಿರುವ ವಿಷಯಗಳೆಲ್ಲವೂ ಅಂತಾರಾಷ್ಟ್ರೀಯ ಸ್ತರದಲ್ಲಿ ಪಾಕಿಸ್ತಾನದ ಮಾನವನ್ನು ಮೂರಾಬಟ್ಟೆ ಮಾಡುತ್ತಿದೆ. ದಾವೂದ್ ಇಬ್ರಾಹಿಂ ಮೊದಲಾದ ಉಗ್ರಗಾಮಿಗಳು ನಮ್ಮಲ್ಲಿಲ್ಲ, ಭಾರತದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿರುವುದು ನಮ್ಮವರಲ್ಲ, ಭಾರತದ ವಿರುದ್ಧ ಕತ್ತಿ ಮಸೆಯಲು ನಮ್ಮ ನೆಲದಲ್ಲಿ ಅವಕಾಶ ನೀಡುವುದಿಲ್ಲ ಎಂದೆಲ್ಲ ಬೊಗಳೆ ಬಿಡುತ್ತಿದ್ದ ಪಾಕಿಸ್ತಾನ ಸರಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗುತ್ತಲೇ ಬಂತು.ಮುಂಬಯಿ ಕಲಿಸಿದ ಪಾಠ
ಮುಂಬಯಿ ದಾಳಿ ಪ್ರಕರಣ ಮುಖ್ಯವಾಗಿ ಐದು ಅಂಶಗಳ ಮೇಲೆ ಬೆಳಕು ಚೆಲ್ಲಿತು. ಒಂದನೆಯದು ಆಳುವವರು ಓಟು ಬ್ಯಾಂಕ್ ರಾಜಕಾರಣ ಬಿಟ್ಟು ಉಗ್ರವಾದದ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಮನ ಮಾಡಿದರು.
|
|