Select Your Language

Notifications

webdunia
webdunia
webdunia
webdunia

ಸಹೋದರತ್ವದ ದಾತಾರ್ ದರ್ಗಾ

ಮೀರನ್ ದಾತಾರ್
WD
ದೇವರ ನ್ಯಾಯಾಲಯದಲ್ಲಿ ಹಿಂದು, ಮುಸ್ಲಿಂ, ಸಿಖ್ ಅಥವಾ ಕ್ರೈಸ್ತ ಎಂಬ ಭೇದ ಭಾವ ಇರುವುದಿಲ್ಲ. ಧಾರ್ಮಿಕ ಯಾತ್ರೆಯ ಈ ಕಂತಿನಲ್ಲಿ ನಾವು ಈ ಬಾರಿ ಮೀರನ್ ದಾತಾರ್ ಎಂಬ ಪವಿತ್ರ ಸ್ಥಳಕ್ಕೆ ಕರೆದೊಯ್ಯುತ್ತಿದ್ದೇವೆ.

ಉತ್ತರ ಗುಜರಾತಿನಲ್ಲಿ ಉನಾವಾ ಎಂಬ ಸಣ್ಣ ಗ್ರಾಮವಿದೆ. ಇದು ಮೆಹ್ಸಾನಾ-ಪಾಲಾಂಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮೀಪವಿದ್ದು, ಈ ಗ್ರಾಮ ಕೃಷಿ ಪ್ರಾಬಲ್ಯ ಗ್ರಾಮವಾ ಗಿದ್ದು, ಪವಿತ್ರ ಮಂದಿರ ಹಜರತ್ ಮೀರನ್ ಸೈಯದ್ ಅಲಿ ದಾತಾರ್‌ನಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ. ಈ ಗ್ರಾಮದ ಪ್ರವೇಶದಲ್ಲಿ ಈ ದರ್ಗಾವಿದ್ದು, ಇದು 600 ವರ್ಷಗಳಷ್ಟು ಹಳೆಯದಾಗಿದೆ.

ತಮ್ಮ ಇಚ್ಛೆ ಪೂರೈಕೆಗಾಗಿ ಮುಸ್ಲಿಮರು ಮಾತ್ರವಲ್ಲದೇ ಬಹು ಸಂಖ್ಯಾತ ಹಿಂದೂಗಳೂ ಇಲ್ಲಿಗೆ ಆಗಮಿಸುತ್ತಾರೆ. ಈ ದರ್ಗಾವು ಪವಾಡಸದೃಶವಾಗಿದ್ದು, ದುಷ್ಟಶಕ್ತಿಗಳನ್ನು ಹೋಗಲಾಡಿಸಲು ಮತ್ತು ಗುಣಹೊಂದದ ರೋಗಗಳನ್ನು ಗುಣಪಡಿಸುವ ಸಲುವಾಗಿ ಜನರು ಇಲ್ಲಿಗೆ ಬರುತ್ತಾರೆ. ಈ ಮಂದಿರಕ್ಕೆ ಕಾಲಿಡುವಾಗಲೇ ಈ ಪ್ರದೇಶದ ಶಕ್ತಿಮಹಿಮೆ ನಿಮಗೆ ತಿಳಿಯುತ್ತದೆ.

ಈ ದರ್ಗಾದ ಕುರಿತು ಜನರಲ್ಲಿದ್ದ ನಂಬಿಕೆಯ ಮಿಥ್ ಗಮನಾರ್ಹವಲ್ಲ, ಇದರ ಇತಿಹಾಸವು ಇನ್ನೂ ಆಸಕ್ತಿಕರವಾಗಿದೆ. ಷಾ ಸೊರಾತ್ ಎಂಬ ಹಿಂದಿ ಕವಿಯೊಬ್ಬ ಸೈಯದ್ ಅಲಿಗೆ ಮೀರನ್ ದಾತರ್ ಎಂಬ ಹೆಸರನ್ನು ನೀಡಿದ. ಮೀರನ್ ಎಂದರೆ ಮನುಷ್ಯ ಎಂದರ್ಥ. ದಾತರ್ ಎಂದರೆ ಉದಾರಿ ಎಂದರ್ಥ. ನಂತರ ಸೈಯದ್ ಅಲಿ ಸೈಯದ್ ಅಲಿ ಮೀರನ್ ದಾತಾರ್ ಎಂದು ಪ್ರಸಿದ್ಧಿಯಾಯಿತು.
webdunia
WD


ಹಜರತ್ ಸೈಯದ್ ಅಲಿ ಮೀರನ್ ದಾತಾರ್‌ನ ಪೂರ್ವಿಕರು ಭುಕಾರಾದಿಂದ ಭಾರತಕ್ಕೆ ಆಗಮಿಸಿದ್ದರು ಎಂದು ಹೇಳಲಾಗುತ್ತದೆ. ಹಜರತ್ ಸೈಯದ್ ಅಲಿ 29ನೇ ರಂಜಾನ್ 879(ಹಿಜಾರಿ ಕ್ಯಾಲೆಂಡರ್)ನಂದು ಅಹಮದಾಬಾದ್ ನಗರದ ಕಾನ್ಫುರ್‌ನ ಸೈಯದ್ವಾರದಲ್ಲಿ ಜನ್ಮತಾಳಿದ್ದರು. ಬಾಲ್ಯದಿಂದಲೇ ಇವರು ದೈವೀಶಕ್ತಿಯನ್ನು ಹೊಂದಿದ್ದರು.

ಇವರಿಗೆ 16 ವರ್ಷವಿದ್ದಾಗ ಮಧ್ಯಪ್ರದೇಶದ ಜಾದುಗಾರನೊಬ್ಬ ತನ್ನ ಮಾಯಾ ದಬ್ಬಾಳಿಕೆಯಿಂದ ಎಲ್ಲರನ್ನೂ ಹೆದರಿಸುತ್ತಿದ್ದನು. ಯಾರೊಬ್ಬರೂ ಆತನ ಮುಂದೆ ನಿಲ್ಲಲು ಹೆದರುತ್ತಿದ್ದರು. ಆದರೆ, ಸೈಯದ್ ಅಲಿ ಈ ಜಾದೂಗಾರನ ಉಪಟಳವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.

ಮೀರನ್ ದಾತರ್ 29ನೇ ಸಫಾರ್898(ಹಿಜಾರ ಕ್ಯಾಲೆಂಡರ್)ರಂದು ನಿಧನರಾದರು. ಉನಾವಾದಲ್ಲಿ ಅವರನ್ನು ಸಮಾಧಿ ಮಾಡಲಾಗಿದ್ದು, ಅಂದಿನಿಂದ ಇಂದಿನವರೆಗೂ, ವಿಶ್ವದ ಎಲ್ಲಾ ಮೂಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ.

webdunia
WD
ಪ್ರಾರ್ಥನೆ ಮತ್ತು ಔಷಧ: ಇಲ್ಲಿಗೆ ಬರುವವರಿಗೆ ದೈಹಿಕ ಮತ್ತು ಮಾನಸಿಕ ತೊಂದರೆಗಳು ಶಮನಗೊಳ್ಳುತ್ತದೆ. ಈ ಮಂದಿರದ ಟ್ರಸ್ಟಿಯಾಗಿರುವ ಸೈಯದ್ ಚೋಟು ಮಿಯಾನ್ ಹೇಳುವಂತೆ, ಔಷಧ ಮತ್ತು ಪ್ರಾರ್ಥನೆ ಎರಡೂ ವಿಧಗಳ ಮೂಲಕ ಭಕ್ತಾಧಿಗಳ ತೊಂದರೆಗಳನ್ನು ನಿವಾರಿಸಲಾಗುತ್ತದೆ.

ಇತ್ತೀಚೆಗೆ, ಗುಜರಾತ್ ಸರಕಾರವು ಇದರ ಸಹಾಯಕ್ಕೆ ಮುಂದೆ ಬಂದಿದೆ. ಪ್ರತಿ ಮಂಗಳವಾರ ಮಾನಸಿಕ ರೋಗಿಗಳನ್ನು ಪರೀಕ್ಷಿಸಲು ವೈದ್ಯರು ಇಲ್ಲಿಗೆ ಭೇಟಿ ನೀಡುತ್ತಾರೆ. ರೋಗಿಗಳಿಗೆ ಯಾವುದೇ ವೈದ್ಯಕೀಯ ಶುಲ್ಕವಿರುವುದಿಲ್ಲ.

ಹೋಗುವುದು ಹೇಗೆ ?

ವಾಯುಮಾರ್ಗ: ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಅಹಮದಾಬಾದ
webdunia
WD


ರೈಲುಮಾರ್ಗ: ಉಂಜಾ ಮತ್ತು ಮೆಹ್ಸಾನಾ ರೈಲು ನಿಲ್ದಾಣದಿಂದ ಕ್ರಮವಾಗಿ ಈ ಮಂದಿರಕ್ಕೆ 5 ಮತ್ತು 19 ಕಿ.ಮೀ ಅಂತರ.

ಭೂಮಾರ್ಗ: ದೆಹಲಿ-ಪಾಲಾಂಪುರ್-ಅಹ್ಮದಾಬಾದ್ ಹೈವೇಯಲ್ಲಿ ಉನಾವಾ ಇದ್ದು, ಇದು ಪಾಲಾಂಪುರದಿಂದ 55 ಕಿ.ಮೀ ಮತ್ತು ಅಹ್ಮದಾಬಾದ್‌ನಿಂದ 95 ಕಿ.ಮೀ ದೂರದಲ್ಲಿದೆ.

Share this Story:

Follow Webdunia kannada