Webdunia - Bharat's app for daily news and videos

Install App

ಜನಪ್ರಿಯ ಜೈನ ಯಾತ್ರಾಸ್ಥಳ ಶ್ರವಣಬೆಳಗೊಳದ ಬಾಹುಬಲಿ

Webdunia
ಶನಿವಾರ, 25 ಜೂನ್ 2016 (20:24 IST)
ಶ್ರವಣಬೆಳಗೊಳ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಜೈನ ಯಾತ್ರಾಸ್ಥಳವಾಗಿದೆ. ಪಟ್ಟಣದ ಮಧ್ಯದಲ್ಲಿರುವ ಕೊಳದಿಂದ ಈ ಪ್ರದೇಶಕ್ಕೆ ಹೆಸರು ಬಂದಿದೆ.(ಬೆಳ-ಕೊಳ ಅಂದರೆ ಬಿಳಿಯ ಕೊಳ). ಶ್ರವಣಬೆಳಗೊಳ ಬಾಹುಬಲಿ ಪ್ರತಿಮೆಗೆ ಪ್ರಖ್ಯಾತವಾಗಿದ್ದು, ಜಗತ್ತಿನಲ್ಲಿ ಅತೀ ಎತ್ತರದ ಶಿಲೆಯ ಪ್ರತಿಮೆ ಎಂದು ಹೆಸರು ಪಡೆದಿದೆ. 58 ಅಡಿ ಎತ್ತರದ ಈ ಮೂರ್ತಿಯನ್ನು ಗ್ರಾನೈಟ್‌ನ ಏಕಶಿಲೆಯಿಂದ ಕೆತ್ತಲಾಗಿದೆ.  3347 ಅಡಿ ಎತ್ತರದ ಬೆಟ್ಟದ ಮೇಲೆ ಗೋಮಟೇಶ್ವರ ಮಂದಿರವನ್ನು ನಿರ್ಮಿಸಲಾಗಿದೆ.

ಈ ಬೆಟ್ಟವನ್ನು ವಿಂದ್ಯಾಗಿರಿ ಎಂದು ಕರೆಯಲಾಗುತ್ತದೆ. ಬೆಟ್ಟದ ಅಡಿಯಿಂದ ಈ ದೇವಾಲಯ ತಲುಪಲು 620 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಮಂದಸ್ಮಿತ ಬಾಹುಬಲಿಯ  ನಗ್ನ ಮೂರ್ತಿಯನ್ನು ಅತ್ಯಂತ ಪರಿಪೂರ್ಣತೆಯೊಂದಿಗೆ ಕೆತ್ತಲಾಗಿದೆ.
ಬಾಹುಬಲಿ ಮೊದಲ ಜೈನ ತೀರ್ಥಂಕರ ಆದಿನಾಥನ ಪುತ್ರ.

ಆದಿನಾಥನಿಗೆ 99 ಮಂದಿ ಮಕ್ಕಳಿದ್ದು, ರಾಜ್ಯಭಾರವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದಾಗ ಇಬ್ಬರು ಸೋದರರಾದ ಬಾಹುಬಲಿ ಮತ್ತು ಭರತನ ನಡುವೆ ಸಾಮ್ರಾಜ್ಯಕ್ಕಾಗಿ ದೊಡ್ಡ ಯುದ್ಧ ನಡೆಯುತ್ತದೆ. ಭರತ ಯುದ್ಧದಲ್ಲಿ ಸೋತರೂ ಬಾಹುಬಲಿಗೆ ತಮ್ಮನ ಸೋಲಿನಿಂದ ಸಂತೋಷದ ಭಾವನೆಯೇನೂ ಉಂಟಾಗಲಿಲ್ಲ. ತನ್ನ ಸೋದರನಿಗೆ ರಾಜ್ಯವನ್ನು ಒಪ್ಪಿಸಿ, ಸಕಲ ಧನಕನಕಗಳನ್ನು ತ್ಯಜಿಸಿ  ಕೇವಲಜ್ಞಾನವನ್ನು ಸಂಪಾದಿಸುತ್ತಾನೆ.
 
ಗಂಗಾ ರಾಜ ರಾಜಮಲ್ಲನ ಸಚಿವ ಚಾಮುಂಡರಾಯನ ಕಾಲದಲ್ಲಿ ಈ ವಿಗ್ರಹವನ್ನು ಕೆತ್ತಲಾಗಿದೆ. ಶ್ರವಣಬೆಳಗೊಳ ಪಟ್ಟಣವು ಅನೇಕ ಜೈನ ಮಂದಿರಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಪ್ರಖ್ಯಾತವಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ