Webdunia - Bharat's app for daily news and videos

Install App

ಬೆಟ್ಟದ ಮೇಲೆ ನೆಲೆಗೊಂಡ ಆನೆಗುಡ್ಡೆ ವಿನಾಯಕ ದೇವಸ್ಥಾನ

Webdunia
ಶುಕ್ರವಾರ, 24 ಜೂನ್ 2016 (20:34 IST)
ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂಬಾಶಿಯು ಕುಂದಾಪುರಕ್ಕೆ 9 ಕಿಮೀ ದೂರದಲ್ಲಿ ನೆಲೆಗೊಂಡಿದೆ. ಮಹಾಲಿಂಗೇಶ್ವರ ಮತ್ತು ಆನೆಗುಡ್ಡೆ ವಿನಾಯಕ ಮಂದಿರಗಳಿಗೆ ಇದು ಪ್ರಖ್ಯಾತಿ ಪಡೆದಿದೆ. ಈ ಸ್ಥಳದ ಹೆಸರು  ಕುಂಬಾಸುರನಿಂದ ಜನ್ಯವಾಗಿದೆ. ಶಾಸನಗಳಲ್ಲಿ ಕುಂಭಾ-ಕಾಶಿ ಎಂದೇ ಈ ಸ್ಥಳವನ್ನು ವರ್ಣಿಸಲಾಗಿದೆ. ಪರಶುರಾಮ ಸೃಷ್ಟಿ ಎಂದು ಕರೆಯುವ ಏಳು ಸ್ಥಳಗಳ ಪೈಕಿ ಇದೂ ಕೂಡ ಯಾತ್ರಾಸ್ಥಳವಾಗಿದೆ.
 
 
ಬೆಟ್ಟದಲ್ಲಿ ನೆಲೆಗೊಂಡಿರುವ ಆನೆಗುಡ್ಡೆ ವಿನಾಯಕ ದೇವಸ್ಥಾನವು ಅನೇಕ ಮಂದಿ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.  ಮಹಾಲಿಂಗೇಶ್ವರ ದೇವಾಲಯವು ಕೆರೆಯಿಂದ ಸುತ್ತುವರಿದಿದ್ದು ಭಾಗೀರಥಿ ನೀರು ಉದ್ಭವವಾಗುತ್ತದೆಂದು ಹೇಳುವ ಆಳವಿಲ್ಲದ ಗುಂಡಿಗೆ ಪೂಜೆ ಸಲ್ಲಿಸಲಾಗುತ್ತದೆ. ಕೆರೆಯ ಬಲಭಾಗದಲ್ಲಿ ಸೂರ್ಯ ಪುಷ್ಕರಣಿ ಮತ್ತು ಎಡಭಾಗದಲ್ಲಿ ಚಂದ್ರ ಪುಷ್ಕರಣಿಯಿವೆ. 
ಆನೆಗುಡ್ಡೆಯೆಂದರೆ ಆನೆ ಸೊಂಡಿಲಿನ ದೇವರು ವಿನಾಯಕನ ಆವಾಸಸ್ಥಾನ. ಈ ಪ್ರದೇಶದಲ್ಲಿ ಬರಗಾಲ ಅಪ್ಪಳಿಸಿದಾಗ ಅಗಸ್ತ್ಯ ಮುನಿ ವರುಣನ ಸಂತೃಪ್ತಿಗೆ ಯಜ್ಞ ಮಾಡಿದರು. ಕುಂಬಾಸುರ ರಾಕ್ಷಸ ಯಜ್ಞವನ್ನು ನಡೆಸುವ ಋಷಿಗಳಿಗೆ ತೊಂದರೆ ಮಾಡಿದ. ಈ ಋಷಿಗಳನ್ನು ಪಾರು ಮಾಡಲು ಭಗವಾನ್ ಗಣೇಶ ಭೀಮನಿಗೆ ಆಶೀರ್ವದಿಸಿ ಕತ್ತಿಯೊಂದನ್ನು ನೀಡಿದ. ಈ ಕತ್ತಿಯಿಂದ ಭೀಮ ರಾಕ್ಷಸನನ್ನು ಕೊಂದು ಯಜ್ಞ ನೆರವೇರಲು ಅನುಕೂಲ ಕಲ್ಪಿಸಿದ ಎಂಬ ಪೌರಾಣಿಕ ಕಥೆಯಿದೆ. 
 
ವ್ಯಕ್ತಿಯ ತೂಕಕ್ಕೆ ಸಮನಾದ ಮೌಲ್ಯಯುತ ವಸ್ತುಗಳನ್ನು ಭಕ್ತರು ದೇವರಿಗೆ ಅರ್ಪಿಸುವ ಪದ್ಧತಿಯಿದ್ದು ಅದಕ್ಕೆ ತುಲಾಭಾರ ಎನ್ನಲಾಗುತ್ತದೆ. ಪವಿತ್ರ ಆಚರಣೆಗಳಾದ ಮದುವೆ, ನಾಮಕರಣ ಮುಂತಾದವು ಕೂಡ ಇಲ್ಲಿ ನಡೆಯುತ್ತದೆ.
 
ಇಲ್ಲಿ ಪಂಚಕಜ್ಜಾಯ ಎಂಬ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಇದು ಬೇಳೆ, ಸಕ್ಕರೆ, ಕೊಬ್ಬರಿ, ಹಾಲು ಮತ್ತು ಜೇನುತುಪ್ಪದ ಮಿಶ್ರಣವಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

ಮುಂದಿನ ಸುದ್ದಿ
Show comments