ವಿಷಯುಕ್ತ ತರಕಾರಿ ತೊಳೆಯುವುದು ಹೇಗೆ?

Webdunia
ಬುಧವಾರ, 28 ಜೂನ್ 2017 (11:39 IST)
ಬೆಂಗಳೂರು: ಇಂದಿನ ಕಾಲದಲ್ಲಿ ಶುದ್ಧ ತರಕಾರಿ ಸಿಗುವುದು ಕನಸಿನ ಮಾತು. ಆದಷ್ಟು ತೊಳೆದು ತಿನ್ನುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ತರಕಾರಿಗಳನ್ನು ತೊಳೆಯುವುದು ಹೇಗೆ ಎಂದು ನೋಡೋಣ.

 
ಉಪ್ಪು ಮತ್ತು ಅರಸಿನ ಹುಡಿ
ಉಪ್ಪು ಮತ್ತು ಅರಸಿನ ಹುಡಿಯಲ್ಲಿ ವಿಷ ತೆಗೆಯುವ ಸಾಮರ್ಥ್ಯವಿದೆ. ಹಾಗಾಗಿ ತರಕಾರಿಗಳನ್ನು ತಂದ ಕೂಡಲೇ ಉಪ್ಪು ಮತ್ತು ಕೊಂಚ ಅರಸಿನ ಪುಡಿ ಹಾಕಿದ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಟ್ಟು ನಂತರ ತೊಳೆದು ಉಪಯೋಗಿಸಿ.

ನಿಂಬೆ ಹಣ್ಣು
ನಿಂಬೆ ಹಣ್ಣು, ಬೇಕಿಂಗ್ ಸೋಡಾ ಮತ್ತು ನೀರು ಮಿಶ್ರಣ ಮಾಡಿದ ದ್ರಾವಣ ಮಾಡಿ ತರಕಾರಿಗೆ ಸ್ಪ್ರೇ ಮಾಡಿ ತೊಳೆದುಕೊಳ್ಳಿ. ಇದರಿಂದ ವಿಷ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.

ಕುದಿಯುವ ನೀರು
ಕುದಿಯುವ ನೀರಿನಲ್ಲಿ ತರಕಾರಿಯನ್ನು ನೆನೆಸಿಟ್ಟ ನಂತರ ಐದು ನಿಮಿಷದ ನಂತರ ಹೊರ ತೆಗೆದು ಬಳಸಿಕೊಳ್ಳಿ.

ಸಿಪ್ಪೆ ತೆಗೆಯುವುದು
ಆಪಲ್ ನಂತಹ ಹಣ್ಣುಗಳ ಸಿಪ್ಪೆಯಲ್ಲಿ ಅಧಿಕ ವಿಷಕಾರಿ ಅಂಶವಿರುತ್ತದೆ ಎನ್ನಲಾಗುತ್ತದೆ. ಹೀಗಾಗಿ ಇಂತಹ ಹಣ್ಣುಗಳನ್ನು ಉಪಯೋಗಿಸುವ ಮೊದಲು ಸಿಪ್ಪೆ ತೆಗೆಯುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಕಾಡುವ ತಲೆನೋವಿಗೆ ತಕ್ಷಣದ ಉಪಶಮನಕ್ಕಾಗಿ ಈ ರೀತಿ ಮಾಡಿ

ಚಿಕ್ಕ ಗಾಯಗಳೂ ಬೇಗ ಗುಣವಾಗುತ್ತಿಲ್ಲ ಎಂದರೆ ಕಾರಣವೇನು ಗೊತ್ತಾ

ಬೀಸಿಲಿನ ಝಳಕ್ಕೆ ಬೇರೆಲ್ಲ ಪಾನೀಯ ಕುಡಿಯುವ ಬದಲು ಇದನ್ನೊಮ್ಮೆ ಟ್ರೈ ಮಾಡಿ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ಮುಂದಿನ ಸುದ್ದಿ
Show comments