Webdunia - Bharat's app for daily news and videos

Install App

ಉಳಿದಿರುವ ಆಹಾರ ಪದಾರ್ಥದಿಂದ ಸ್ವಾದಿಷ್ಟ ಅಡುಗೆ ಮಾಡೋದು ಹೇಗೆ ಗೊತ್ತಾ?

athita
ಬುಧವಾರ, 13 ಡಿಸೆಂಬರ್ 2017 (14:29 IST)
ನೀವು ಉಳಿದಿರುವ ಆಹಾರ ಪದಾರ್ಥದಿಂದ ಹೊಸದೇನಾದರೂ ಮಾಡಲು ಬಯಸಿದ್ದೀರಾ? ನಿಮಗಾಗಿ ಉಳಿದಿರುವ ಆಹಾರ ಪದಾರ್ಥವನ್ನು ಬಳಸಿಕೊಂಡು ರುಚಿ ರುಚಿಯಾದ ಸ್ವಾದಿಷ್ಟ ಅಡುಗೆಗಳನ್ನು ತಯಾರಿಸೋದು ಹೇಗೆ ಅಂತಾ ನಾವು ತಿಳಿಸಿಕೊಡ್ತಿವಿ
 
1.ಇಡ್ಲಿ ಉಪ್ಪಿಟ್ಟು-

ಬೇಕಾಗುವ ಸಾಮಗ್ರಿ-
 
ಚಿಕ್ಕದಾಗಿ ತುಂಡು ಮಾಡಿದ ಇಡ್ಲಿ (10)
 
1 ಸಣ್ಣಗೆ ಹೆಚ್ಚಿದ ಈರುಳ್ಳಿ
1 ಸಣ್ಣಗೆ ಹೆಚ್ಚಿದ ಟೊಮೆಟೊ
2 ಟೇಬಲ್ ಚಮಚ ಕಡಲೆಬೇಳೆ
2 ಟೇಬಲ್ ಚಮಚ ಉದ್ದಿನಬೇಳೆ
ಕೊತ್ತಂಬರಿ ಸೊಪ್ಪು
ತೆಂಗಿನ ತುರಿ
ಲಿಂಬೆ ರಸ
ಹಸಿ ಮೆಣಸಿನ ಕಾಯಿ
ಉಪ್ಪು
ಸಕ್ಕರೆ
ಸಾಸಿವೆ
ಜೀರಿಗೆ
ಕರಿಬೇವಿನ ಸೊಪ್ಪು
ಎಣ್ಣೆ
 
ಮಾಡುವ ವಿಧಾನ-
 
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಕಡಲೆಬೇಳೆ, ಉದ್ದಿನಬೇಳೆ ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಒಗ್ಗರಣೆ ಕೊಡಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೆಟೊ, ಉಪ್ಪು, ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಬಾಡಿಸಿ, ಚಿಕ್ಕದಾಗಿ ತುಂಡು ಮಾಡಿದ ಇಡ್ಲಿ ಹಾಕಿ ಹುರಿದು, ಅರ್ಧ ಲಿಂಬೆಯ ರಸ, ಸ್ವಲ್ಪ ತೆಂಗಿನ ತುರಿ, ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬಾಡಿಸಿದರೆ ರುಚಿಯಾದ ಇಡ್ಲಿ ಉಪ್ಪಿಟ್ಟು ರೆಡಿ.
 
2.ಚಿತ್ರಾನ್ನ-

ಬೇಕಾಗುವ ಸಾಮಗ್ರಿ-
 
ಬಿಸಿ ಮಾಡಿದ ಉಳಿದಿರುವ ಅನ್ನ(1 ಕಪ್)
1 ಸಣ್ಣಗೆ ಹೆಚ್ಚಿದ ಈರುಳ್ಳಿ
1 ಸಣ್ಣಗೆ ಹೆಚ್ಚಿದ ಟೊಮೆಟೊ
2 ಟೇಬಲ್ ಚಮಚ ಕಡಲೆಬೇಳೆ
2 ಟೇಬಲ್ ಚಮಚ ಉದ್ದಿನಬೇಳೆ
ಕೊತ್ತಂಬರಿ ಸೊಪ್ಪು
ತೆಂಗಿನ ತುರಿ
ಲಿಂಬೆ ರಸ
ಹಸಿ ಮೆಣಸಿನ ಕಾಯಿ
ಉಪ್ಪು
ಅರಿಶಿನ
ಸಕ್ಕರೆ
ಸಾಸಿವೆ
ಜೀರಿಗೆ
ಕರಿಬೇವಿನ ಸೊಪ್ಪು
ಎಣ್ಣೆ
 
ಮಾಡುವ ವಿಧಾನ-
 
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಕಡಲೆಬೇಳೆ, ಉದ್ದಿನಬೇಳೆ ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಒಗ್ಗರಣೆ ಕೊಡಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೆಟೊ, ಉಪ್ಪು, ಸ್ವಲ್ಪ ಸಕ್ಕರೆ,ಅರಿಶಿನ ಸೇರಿಸಿ ಚೆನ್ನಾಗಿ ಬಾಡಿಸಿ, ಬಿಸಿ ಮಾಡಿದ ಉಳಿದಿರುವ ಅನ್ನ ಹಾಕಿ ಬಾಡಿಸಿ, ಅರ್ಧ ಲಿಂಬೆಯ ರಸ, ಸ್ವಲ್ಪ ತೆಂಗಿನ ತುರಿ, ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬಾಡಿಸಿದರೆ ರುಚಿಯಾದ ಚಿತ್ರನ್ನ ಸವಿಯಲು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments