Select Your Language

Notifications

webdunia
webdunia
webdunia
webdunia

ಕೇರಳ ಕ್ರೀಡಾ ಸಚಿವರ ವಿರುದ್ಧ ದೂರು ನೀಡಿದ ಅಂಜು ಬಾಬ್ಬಿ ಜಾರ್ಜ್

ಕೇರಳ ಕ್ರೀಡಾ ಸಚಿವರ ವಿರುದ್ಧ ದೂರು ನೀಡಿದ ಅಂಜು ಬಾಬ್ಬಿ ಜಾರ್ಜ್
ನವದೆಹಲಿ: , ಗುರುವಾರ, 9 ಜೂನ್ 2016 (18:15 IST)
ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಭಾರತದ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಗುರುವಾರ ಕ್ರೀಡಾ ಸಚಿವ ಇಪಿ ಜಯರಾಜನ್ ವಿರುದ್ಧ ದೂರನ್ನು ನೀಡಿದ್ದಾರೆ. ಕೇರಳ ಕ್ರೀಡಾ ಮಂಡಳಿಯ ಸದಸ್ಯರಿಗೆ ಮತ್ತು ತಮಗೆ ಜಯರಾಜನ್ ಕಿರುಕುಳ ನೀಡಿದ್ದಾರೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. 
 
ಸಚಿವರ ಸೌಜನ್ಯದ ಭೇಟಿ ಸಂದರ್ಭದಲ್ಲಿ ಜಯರಾಜನ್ ತಮ್ಮನ್ನು ಅವಮಾನಿಸಿ ಬೆದರಿಕೆ ಹಾಕಿದ್ದಾರೆಂದು ಅಂಜು ಆರೋಪಿಸಿದ್ದಾರೆ.  ನಾವು ಅಧಿಕಾರಕ್ಕೆ ಬರುವುದಿಲ್ಲವೆಂದು ಭಾವಿಸಿದ್ದೀರಾ, ಈಗ ಕಾದು ನೋಡಿ ಎಂದು ಸಚಿವರು ಅಂಜುಗೆ ಹೇಳಿದ್ದಾಗಿ ವರದಿಯಾಗಿದೆ.
 
ಈ ಘಟನೆಯಿಂದ ಬೇಸರಗೊಂಡ ಅಂಜು ಮುಖ್ಯಮಂತ್ರಿ ಪಿನಯರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ದೂರಿನ ಪತ್ರವನ್ನು ಸಲ್ಲಿಸಿದರು.  ಸಚಿವರು ಎಲ್ಲರನ್ನೂ ವಿರೋಧ ಪಕ್ಷದ ಬೆಂಬಲಿಗರು ಎಂದು ಆರೋಪಿಸಿ, ಎಲ್‌ಡಿಎಫ್ ಅಧಿಕಾರದಲ್ಲಿರುವುದರಿಂದ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆಂದು ಅಂಜು ದೂರಿನಲ್ಲಿ ತಿಳಿಸಿದ್ದಾರೆ. 
 
ಬಾಕ್ಸಿಂಗ್ ಲೆಜೆಂಡ್ ಮಹಮ್ಮದ್ ಅಲಿ ಸಾವು ಕೇರಳಕ್ಕೆ ತುಂಬಾ ನಷ್ಟವಾಗಿದ್ದು, ಅವರು ರಾಜ್ಯಕ್ಕೆ ಅನೇಕ ಪದಕಗಳನ್ನು ಗೆದ್ದಿದ್ದಾರೆ ಎಂದು ಜಯರಾಜನ್ ಹೇಳುವ ಮೂಲಕ ಮುಖಪುಟ ಸುದ್ದಿಯಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಿಯೊ ಒಲಿಂಪಿಕ್ಸ್‌ಗೆ ಏಳು ಬ್ಯಾಡ್ಮಿಂಟನ್ ಆಟಗಾರರು