Webdunia - Bharat's app for daily news and videos

Install App

ನುಡಿಸಿರಿ ದಿನ-2: ವೈವಿಧ್ಯಮಯ ಕಾರ್ಯಕ್ರಮಗಳ ಸಂಗಮ

Webdunia
ಶನಿವಾರ, 29 ನವೆಂಬರ್ 2008 (19:00 IST)
ನುಡಿಸಿರಿ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಬೆಳಗ್ಗೆ ಉದಯರಾಗದಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳ ಆರಂಭ.

5.30 ಕ್ಕೆ ಧಾರವಾಡದ ಗಾಯಕ ವೆಂಕಟೇಶ್ ಕುಮಾರ್ ಅವರು ಹಿಂದೂಸ್ಥಾನಿ ಗಾಯನ ಪ್ರಸ್ತುತಪಡಿಸಿ ನೆರೆದಿದ್ದ ಸಭಿಕರ ಮನಮುದಗೊಳಿಸಿದರು. ಬಳಿಕ ಸಮ್ಮೇಳನಾಧ್ಯಕ್ಷ ಚೆನ್ನವೀರ ಕಣವಿ ಅವರೊಂದಿಗೆ ಸಾರ್ವಜನಿಕ ಸಂವಾದ ಅರ್ಥಪೂರ್ಣವಾಗಿ ಮೂಡಿಬಂತು. ಕಾರ್ಕಳದ ಸುರಮಣಿ ಮಹಾಲಕ್ಷ್ಮೀ ಶೆಣೈ ಅವರ ಭಾವಲಹರಿ ಪ್ರೇಕ್ಷಕರನ್ನು ಸಂಗೀತದ ಹೊಸ ಲೋಕಕ್ಕೆ ಕರೆದೊಯ್ದಿತು.

ವಾಸುದೇವ ನಾಡಿಗ್ ಕವಿಸಮಯ-ಕವಿನಮನ ನಡೆಸಿಕೊಟ್ಟ ಬೆನ್ನಲ್ಲಿ ನಡೆದ "ಕನ್ನಡ ಸಾಹಿತ್ಯ: ಶಕ್ತಿ ಮತ್ತು ವ್ಯಾಪ್ತಿ' ಅಡಿಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಅವರು "ಪ್ರಾಚೀನ ಕನ್ನಡ ಸಾಹಿತ್ಯ:ಪರಂಪರೆ, ಪ್ರಕಾರಗಳು ಮತ್ತು ಮುಖಾಮುಖಿ" ವಿಷಯದಲ್ಲಿ ಹಾಗೂ ಮತ್ತು ಡಾ.ಅರವಿಂದ ಮಾಲಗತ್ತಿಯವರು "ಆಧುನಿಕ ಸಾಹಿತ್ಯ: ಹೊಸ ಸಂವೇದನೆಗಳು" ವಿಷಯದಲ್ಲಿ ವಿಚಾರಪ್ರಚೋದಕ ಪ್ರಬಂಧ ಮಂಡಿಸಿದರು.

' ಕಥಾಸಮಯ' ಕಾರ್ಯಕ್ರಮದಲ್ಲಿ ಕಥೆಗಾರ್ತಿ ವೈದೇಹಿ ಅವರು ನಡೆಸಿಕೊಟ್ಟ ಕಲಾಪ ಇಡೀ ಸದನದ ಮನ ಕಲಕಿತು. ದೇಶ ಪ್ರಸ್ತುತ ಎದುರಿಸುತ್ತಿರುವ ಭಯೋತ್ಪಾದನೆ, ನಾಡಿನ ಜನತೆಯಲ್ಲಿ ತಾಂಡವವಾಡುತ್ತಿರುವ ಭಯದ ಚಿತ್ರಣವನ್ನು ಹಸಿ ಹಸಿಯಾಗಿ ಸಭೆಯ ಮುಂದಿಟ್ಟ ವೈದೇಹಿ ಅಂಥದೇ ಒಂದು ಕಥೆಯನ್ನು ಪ್ರಸ್ತುತಪಡಿಸಿದರು.

ಡಾ.ಅರವಿಂದ ಮಾಲಗತ್ತಿಯವರ ಪತ್ನಿ ಧರಣೀದೇವಿ ಮಾಲಗತ್ತಿಯವರು 'ಕವಿಸಮಯ' ಪ್ರಸ್ತುತಪಡಿಸಿದರು. ಪ್ರೊ.ಎಂ.ರಾಮಚಂದ್ರ ಅವರು "ಜಿ.ಪಿ. ರಾಜರತ್ನಂ ನೆನಪು' ಸ್ಮರಣೆ ಮಾಡಿದರು. ಭೋಜನದ ಬಳಿಕದ ಕವಿಸಯಮದಲ್ಲಿ ಡಾ. ಹೇಮಾ ಪಟ್ಟಣಶೆಟ್ಟಿ ಕವನಗಳಿಂದ ಗಮನ ಸೆಳೆದರೆ, ಕಥೆಗಾರ ಕುಂ. ವೀರಭದ್ರಪ್ಪ 'ಕಥಾಸಮಯ' ನಡೆಸಿಕೊಟ್ಟರು. ಡಾ. ತಾಳ್ತಜೆ ವಸಂತ ಕುಮಾರ್ ಅವರು ವಿ.ಕೃ. ಗೋಕಾಕ್ ಅವರನ್ನು ಸ್ಮರಿಸಿದರು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments