Select Your Language

Notifications

webdunia
webdunia
webdunia
Monday, 7 April 2025
webdunia

ಬಿಜೆಪಿ ಮತ್ತು ಆಪ್ ಬೀದಿ ರಂಪ; ದೆಹಲಿಯಲ್ಲಿ 14 ಆಪ್ ಕಾರ್ಯಕರ್ತರ ಬಂಧನ

ಬಿಜೆಪಿ
ನವದೆಹಲಿ , ಗುರುವಾರ, 6 ಮಾರ್ಚ್ 2014 (10:04 IST)
PTI
ದೆಹಲಿಯ ಬಿಜೆಪಿ ಕಛೇರಿಯ ಮುಂದೆ ದಾಂಧಲೆ ಮಾಡಿದ್ದಕ್ಕಾಗಿ ಪೋಲಿಸರು 14 ಮಂದಿ ಆಪ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅದರಲ್ಲಿ ಇಬ್ಬರ ವಿರುದ್ಧ ಎಫ್ ಆಯ್ ಆರ್ ಕೂಡ ದಾಖಲಾಗಿದೆ.

ಗುಜರಾತ್ ನಲ್ಲಿ ಆಪ್ ನಾಯಕ ಅರವಿಂದ ಕೇಜ್ರಿವಾಲ್ ರವರನ್ನು ಬಂಧಿಸಿದ್ದನ್ನು ಖಂಡಿಸಿ ಆಪ್ ಕಾರ್ಯಕರ್ತರು ಬಿಜೆಪಿ ಕಛೇರಿಯ ಮುಂದೆ ಗಲಾಟೆ ಪ್ರಾರಂಭಿಸಿದ್ದಾರೆ. ಆ ಸಮಯದಲ್ಲಿ ಬಿಜೆಪಿ ಮತ್ತು ಆಪ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಹಲವರು ಗಾಯಗೊಂಡಿದ್ದಾರೆ.

ಗಲಾಟೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಕೇಜ್ರಿವಾಲ್ ಇಷ್ಟು ಚಿಕ್ಕ ಕಾರಣಕ್ಕೆ ನಮ್ಮ ಕಾರ್ಯಕರ್ತರು ದಾಂಧಲೇ ಪ್ರಾರಂಭಿಸಬಾರದಿತ್ತು ಎಂದು ಹೇಳಿದ್ದಾರೆ.

ದೆಹಲಿ ಮತ್ತು ಲಖನೌ ನಲ್ಲಿ ಸಂಭವಿಸಿದ ಘರ್ಷಣೆಗೆ ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

Share this Story:

Follow Webdunia kannada