Webdunia - Bharat's app for daily news and videos

Install App

ಸಿಎಂಗೆ ಇರಿಸುಮುರಿಸಾಗುವ ಪ್ರಶ್ನೆ ಕೇಳಿದ್ದಕ್ಕೆ ವರದಿಗಾರನಿಗೆ ಗೇಟ್ ಪಾಸ್

Webdunia
ಶುಕ್ರವಾರ, 23 ಡಿಸೆಂಬರ್ 2016 (14:50 IST)
ಹರ್ಯಾಣಾ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರಿಗೆ ಇರಿಸುಮುರಿಸಾಗುವ ಪ್ರಶ್ನೆ ಕೇಳಿದ್ದಕ್ಕೆ ಝೀ ಸುದ್ದಿವಾಹಿನಿ ತನ್ನನ್ನು ಕೆಲಸದಿಂದಲೇ ಕಿತ್ತು ಹಾಕಿದೆ ಎಂದು ವರದಿಗಾರನೊಬ್ಬ ಝೀ ಸುದ್ದಿವಾಹಿನಿ ವಿರುದ್ಧ ಆರೋಪಿಸಿದ್ದಾರೆ. 
 
ಬೇರೊಂದು ಸುದ್ದಿಮಾಧ್ಯಮದ ಜತೆ ಈ ಕುರಿತು ಮಾತನಾಡಿರುವ ವರದಿಗಾರ ಮಹೇಂದರ್ ಸಿಂಗ್, ಡಿಸೆಂಬರ್ 19 ರಂದು ನಾನು ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದೆ. ಅದೇ ಸಂಜೆ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಿಎಂ ಅವರ ವಿರುದ್ಧ ಅಣಕಗಳು ವ್ಯಕ್ತವಾದವು. ಹೀಗಾಗಿ ನಾನು ಕೆಲಸ ಮಾಡುತ್ತಿದ್ದ ಝೀ ಸುದ್ದಿವಾಹಿನಿ ನನ್ನಿಂದ ರಾಜೀನಾಮೆಯನ್ನು ತೆಗೆದುಕೊಂಡಿತು.
 
ಕೆಲಸ ಕಳೆದುಕೊಂಡಿರುವುದು ನನಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದರೂ ಹೆಮ್ಮೆಯಿಂದ ಕೆಲಸವನ್ನು ತ್ಯಜಿಸುತ್ತಿದ್ದೇನೆ ಎನ್ನುತ್ತಾರೆ ಸಿಂಗ್. 
 
ನನ್ನ ಕುಟುಂಬದಿಂದಲೂ ನನಗೆ ಸಂಪೂರ್ಣ ಬೆಂಬಲಿವಿದೆ. ನಾನು ಹೆಚ್ಚಿನ ಸಮಯವನ್ನು ರಾಜಕಾರಣಿಗಳಿಗೆ ಪಿಆರ್ ಆಗಿ ಕಳೆಯುವ ವರದಿಗಾರರಂತಲ್ಲ. ನಾನು ಎಂದಿಗೂ ರಾಜಕಾರಣಿಗಳ ಜತೆ ಸಂಪರ್ವನ್ನಿಟ್ಟುಕೊಂಡವನಲ್ಲ. ನನ್ನ ವಾಹನಕ್ಕೂ ಪ್ರೆಸ್ ಸ್ಟಿಕರ್ ಹಾಕಿಕೊಂಡು ಓಡಾಡುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ. 
 
ಖಟ್ಟರ್ ನೋಟು ನಿಷೇಧದ ಬಗ್ಗೆ ನೀಡಿದ್ದ ವಿದಾದಾತ್ಮಕ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಸಿಂಗ್ ಪ್ರಶ್ನಿಸಿದ್ದರು. ಅದಕ್ಕುತ್ತರಿಸುವ ಬದಲು ಖಟ್ಟರ್ ಬೇರೆಯೇ ಉತ್ತರ ನೀಡಿದ್ದರು. ಹೀಗಾಗಿ ಖಟ್ಟರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವ್ಯಂಗ್ಯ, ಕುಹಕ ವ್ಯಕ್ತವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments