Select Your Language

Notifications

webdunia
webdunia
webdunia
webdunia

41 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ಸಿಎಂ ಆದಿತ್ಯನಾಥ್

41 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ಸಿಎಂ ಆದಿತ್ಯನಾಥ್
ಲಕ್ನೋ , ಮಂಗಳವಾರ, 18 ಏಪ್ರಿಲ್ 2017 (20:51 IST)
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳಂಕಿತ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಲಕ್ನೋ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸತ್ಯೇಂದ್ರ ಸಿಂಗ್ ಸೇರಿದಂತೆ 41 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದ್ದಾರೆ.
 
ಕಳೆದ ತಿಂಗಳು ಅಧಿಕಾರಕ್ಕೆ ಬಂದ ಆದಿತ್ಯನಾಥ್ ಸರಕಾರ, ಎರಡನೇ ಬಾರಿಗೆ ಭಾರಿ ವರ್ಗಾವಣೆಗೆ ಮುಂದಾಗಿದೆ. 20 ಐಎಎಸ್ ಅಧಿಕಾರಿಗಳು ಮತ್ತು ಇತರ ಎಂಟು ಮಂದಿ ಅಧಿಕಾರಿಗಳನ್ನು ವೇಟಿಂಗ್‌ಲಿಸ್ಟ್‌‌ನಲ್ಲಿಟ್ಟಿದ್ದಾರೆ.
 
ಮಾಜಿ ಸಿಎಂ ಅಖಿಲೇಶ್ ಯಾದವ್ ಸರಕಾರದಲ್ಲಿ ಬೃಹತ್ ನಾಲ್ಕು ಯೋಜನೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ಆರಂಭಿಸಿರುವ ಸರಕಾರ, ಭ್ರಷ್ಟ ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ.
 
ಯೋಜನೆಗಳಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಮೂರು ದಿನಗಳೊಳಗಾಗಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಲಕ್ನೋ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಿಗೆ, ನಗರಾಭಿವೃದ್ಧಿ ಕಾರ್ಯಾಲಯದ ವಿಶೇಷ ಕಾರ್ಯದರ್ಶಿ ಆರ್‌.ಜೆ.ಚೌಧರಿ ಆದೇಶ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇರಾಕಿ ಸೇನಾಪಡೆಗಳಿಂದ 60 ಐಸಿಸ್ ಉಗ್ರರ ನರಮೇಧ