Select Your Language

Notifications

webdunia
webdunia
webdunia
webdunia

.ಯೋಗಿ ಆದಿತ್ಯನಾಥ್‌ರನ್ನು ಹನುಮಾನ ದೇವರಂತೆ ಬಿಂಬಿಸಿದ ಬಿಜೆಪಿ

ಯೋಗಿ ಆದಿತ್ಯನಾಥ್
ಗೋರಖ್‌ಪುರ್ , ಶುಕ್ರವಾರ, 8 ಜುಲೈ 2016 (15:22 IST)
ಬಿಜೆಪಿಯ ಅಲ್ಪಸಂಖ್ಯಾತ ವಿಭಾಗ ಸಂಸದ ಯೋಗಿ ಆದಿತ್ಯನಾಥ್‌ರನ್ನು ಹನುಮಾನ ದೇವರ ರೀತಿಯಲ್ಲಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
 
ಮಾಧ್ಯಮ ವರದಿಗಳ ಪ್ರಕಾರ, ಗೋರಖ್‌ಪುರ್ ಸಂಸದ ಫೈರ್‌ಬ್ರ್ಯಾಂಡ್ ಖ್ಯಾತಿಯ ಯೋಗಿ ಆದಿತ್ಯನಾಥ್, ಒಂದು ಕೈಯಲ್ಲಿ ಉದ್ದೇಶಿತ ರಾಮಮಂದಿರ ದೇವಾಲಯವನ್ನು ಹೊತ್ತುಕೊಂಡು ಬರುತ್ತಿರುವಂತಹ ಪೋಸ್ಟರ್‌‌ಗಳನ್ನು ನಗರಾದ್ಯಂತ ಬಿಡುಗಡೆಗೊಳಿಸಿದೆ.
 
ರಮಜಾನ್ ಹಬ್ಬದ ದಿನದಂದು  ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ ಬಿಜೆಪಿ ಪೋಸ್ಟರ್ ಮೇಲೆ ಮಿಷನ್ 2017 ಎಂದು ಬರೆಯಲಾಗಿದ್ದು, ರಾಮಮಂದಿರ ನಿರ್ಮಾಣಕ್ಕೆ ನೆರವು ನೀಡುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಲಾಗಿದೆ.
 
ವಿವಾದದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ ಬಿಜೆಪಿ, ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಕ್ಷ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದಂತಾಗಿದೆ.
 
ಮಹತ್ವದ ವಿಷಯವೆಂದರೆ, ಮನಬಂದಂತೆ ಹೇಳಿಕೆ ನೀಡುವವರನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ಮೋದಿ ಇತ್ತೀಚೆಗೆ ಮಾಡಿದ ಸಂಪುಟ ಪುನಾರಚನೆಯಲ್ಲಿ ಯೋಗಿ ಆದಿತ್ಯನಾಥ್‌ಗೆ ಸಚಿವ ಸ್ಥಾನ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

1000 ಕಾರ್ ಕದ್ದ 'ಸೂಪರ್ ಕಳ್ಳ'ನ ಮರು ಬಂಧನ