Webdunia - Bharat's app for daily news and videos

Install App

ಅಬ್ಬಾ.. ಆಶ್ಚರ್ಯವೆನಿಸಿದರೂ ಸತ್ಯ : 27 ಯುವಕರನ್ನ ಮದುವೆಯಾಗಿ ವಂಚಿಸಿ ಖತರ್ನಾಕ್ ಲೇಡಿ ಎಸ್ಕೇಪ್!

Webdunia
ಸೋಮವಾರ, 17 ಜುಲೈ 2023 (07:59 IST)
ಶ್ರೀನಗರ : ಮಹಿಳೆಯೊಬ್ಬಳು ಬರೋಬ್ಬರಿ 27 ಯುವಕರನ್ನು ಮದುವೆಯಾಗಿ ವಂಚಿಸಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ವಂಚಿತರ ಪೈಕಿ 12 ಮಂದಿ ತಮ್ಮ ಪತ್ನಿ ನಾಪತ್ತೆಯಾಗಿದ್ದಾಳೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ನೀಡಿದ ಫೋಟೋಗಳನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ.

ಈ ಖತರ್ನಾಕ್ ಲೇಡಿ, 2015 ರಲ್ಲಿ ಬಿಡುಗಡೆಯಾದ ‘ಡಾಲಿ ಕಿ ಡೋಲಿ’ ಸಿನಿಮಾದಿಂದ ಸ್ಫೂರ್ತಿಯಾಗಿ ಯುವಕರನ್ನು ವಂಚಿಸಿದ್ದಾಳೆ. ಮಹಿಳೆ ಶ್ರೀಮಂತ ವ್ಯಕ್ತಿಗಳನ್ನು ಮದುವೆಯಾಗುತ್ತಾಳೆ. ಹುಡುಗನ ಕುಟುಂಬಗಳಿಂದ ನಗದು ಮತ್ತು ಆಭರಣಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಾಳೆ. ಇದು ಸಿನಿಮಾದ ಸ್ಟೋರಿ. ಅದರಿಂದ ಸ್ಫೂರ್ತಿಯಾಗಿ ಕಾಶ್ಮೀರದ ಮಹಿಳೆ ಕೂಡ 27 ಯುವಕರನ್ನು ವಂಚಿಸಿದ್ದಾರೆ.

ಮಹಿಳೆ ಬದ್ಗಾಮ್ ಜಿಲ್ಲೆಯಲ್ಲಿಯೇ 27 ಮಂದಿಯನ್ನು ಮದುವೆಯಾಗಿದ್ದು, 12 ಮಂದಿ ಮಾತ್ರ ಪೊಲೀಸರನ್ನು ಸಂಪರ್ಕಿಸಿದ್ದಾರೆ. ವಂಚನೆಗೊಳಗಾದವರ ಪೈಕಿ ಯುವಕನೊಬ್ಬನ ತಂದೆ, ಪೊಲೀಸರಿಗೆ ದೂರು ನೀಡಿದ್ದಾರೆ. ದೈಹಿಕ ಅನಾರೋಗ್ಯದ ಕಾರಣ ನನ್ನ ಮಗನಿಗೆ ಮದುವೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮಧ್ಯವರ್ತಿಯೊಬ್ಬರು ನಮ್ಮ ಬಳಿಗೆ ಬಂದು 2 ಲಕ್ಷ ರೂ. ನೀಡಿದರೆ, ವಧುವನ್ನು ಮದುವೆಗೆ ಹೊಂದಿಸುವುದಾಗಿ ಹೇಳಿದ್ದ. ಇದಕ್ಕೆ ಒಪ್ಪಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಮದುವೆಗೆ ಮುಂದಾದೆವು ಎಂದು ತಿಳಿಸಿದ್ದಾರೆ.

ಮದುವೆಯ ಸಮಯದಲ್ಲಿ ವಧುವಿಗೆ 3.80 ಲಕ್ಷ ರೂ. ನಗದು ಮತ್ತು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಮೆಹರ್ ಆಗಿ ನೀಡಲಾಯಿತು. ಮದುವೆಯಾದ ಕೆಲ ದಿನಗಳ ನಂತರ ಆಸ್ಪತ್ರೆಗೆ ಹೋಗುವುದಾಗಿ ಅತ್ತೆಯಂದಿರಿಂದ ಅನುಮತಿ ಪಡೆದ ವಧು ವಾಪಸ್ ಬರಲೇ ಇಲ್ಲ ಎಂದು ದೂರಿದ್ದಾರೆ. ಬಹುತೇಕ ಎಲ್ಲಾ ಸಂತ್ರಸ್ತರ ಅನುಭವವೂ ಇದೇ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಳೇ ಜಾತಿ ಸಮೀಕ್ಷೆಗೆ 187 ಕೋಟಿ ಖರ್ಚಾಯ್ತಲ್ಲಾ ಅಂದ್ರೆ ಅದೆಲ್ಲಾ ಪರ್ವಾಗಿಲ್ಲ ಎಂದ ಸತೀಶ್ ಜಾರಕಿಹೊಳಿ

E Tukaram: ಬಳ್ಳಾರಿ ಚುನಾವಣೆಗೆ ಬರೋಬ್ಬರಿ 21 ಕೋಟಿ ಹಣ ಬಳಕೆ: ಸಂಸದ ಇ ತುಕರಾಂ ಇಡಿ ವಶಕ್ಕೆ

Gold price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvamshi murder: ಗುಡ್ಡ ಹತ್ತಿ ಸುಸ್ತು ಎಂದಿದ್ದ ಹಂತಕರಿಗೆ ಸೋನಂ ನೀಡಿದ್ದ ಆಫರ್ ಏನು

Raj Raghuvamshi murder: ಸೋನಂಳನ್ನು ಅಕ್ಕ ಎನ್ನುತ್ತಿದ್ದ ಮರ್ಡರ್ ಆದ ದಿನವೂ ಊರಲ್ಲೇ ಇದ್ದ

ಮುಂದಿನ ಸುದ್ದಿ
Show comments