Select Your Language

Notifications

webdunia
webdunia
webdunia
webdunia

ಖರೀದಿಸಿದ ದಿನವೇ ಬೈಕ್ ಕಳುವು: ನೊಂದ ಗೃಹಿಣಿ ಆತ್ಮಹತ್ಯೆ

ಖರೀದಿಸಿದ ದಿನವೇ ಬೈಕ್ ಕಳುವು: ನೊಂದ ಗೃಹಿಣಿ ಆತ್ಮಹತ್ಯೆ
ಹುಬ್ಬಳ್ಳಿ , ಮಂಗಳವಾರ, 28 ಫೆಬ್ರವರಿ 2017 (16:15 IST)
ಪತಿ ಸಾಲ ಮಾಡಿ ಖರೀದಿಸಿದ್ದ ಹೊಸ ಬೈಕ್ ಕಳುವಾಯಿತೆಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹುಬ್ಬಳ್ಳಿಯ ರಾಯನಾಳ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಶಶಿಕಲಾ ಕಮ್ಮಾರ (28) ಎಂದು ಗುರುತಿಸಲಾಗಿದೆ. 
 
ಶಶಿಕಲಾ ಪತಿ ಮಂಜುನಾಥ ಸೋಮವಾರ ಹೊಸ ಬೈಕ್ ಖರೀದಿಸಿದ್ದರು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅವರು ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಅವರನ್ನು ಥಳಿಸಿ ಬೈಕ್ ಕದ್ದು ಪರಾರಿಯಾಗಿದ್ದರು.
 
ಸಾಲ ಮಾಡಿ ತೆಗೆದುಕೊಂಡಿದ್ದ ಬೈಕ್ ತಂದ ದಿನವೇ ಕಳುವಾಯಿತು ಎಂದು ತೀವ್ರವಾಗಿ ನೊಂದಿದ್ದ ಶಶಿಕಲಾ ಪತಿ, ಪೊಲೀಸರಿಗೆ ಬೈಕ್ ಕಳ್ಳತನದ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
 
ಬೈಕ್ ಕಳೆದುಕೊಂಡು ನಿರಾಶರಾಗಿದ್ದ ಮಂಜುನಾಥ್ ಈಗ ಪತ್ನಿಯನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ.
 
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುರ್ಮೆಹರ್ ಕೌರ್ ವಿಡಿಯೋದಲ್ಲಿ ಅಂಥದ್ದೇನಿದೆ..?