Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕನ ಮೇಲೆ ಮೆಣಸಿನ ಪುಡಿ ಎರಚಿದ ಮಹಿಳೆ ಬಂಧನ

ಬಿಜೆಪಿ ಶಾಸಕನ ಮೇಲೆ ಮೆಣಸಿನ ಪುಡಿ ಎರಚಿದ ಮಹಿಳೆ ಬಂಧನ
ಲಕ್ನೋ: , ಗುರುವಾರ, 29 ಸೆಪ್ಟಂಬರ್ 2016 (20:31 IST)
ಬಿಜೆಪಿ ಶಾಸಕ ಕಪಿಲ್ ದೇವ್ ಅಗರ್‌ವಾಲ್ ಮೇಲೆ ಮೆಣಸಿನ ಪುಡಿ ಎರಚಿದ ಆರೋಪದ ಮೇಲೆ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.

ಬಿಜೆಪಿ ಶಾಸಕನ ಮೇಲೆ ಮೆಣಸಿನ ಪುಡಿ ಎರಚಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪದ ಮೇಲೆ ಗೀತಾ ಎನ್ನುವ ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ರೋಜೆಂಟ್ ತ್ಯಾಗಿ ತಿಳಿಸಿದ್ದಾರೆ.
 
ಆದರೆ, ಇತರ ಆರೋಪಿಗಳಾದ ವಿಕ್ರಾಂತ್, ಕಪಿಲ್ ಮತ್ತು ಪ್ರದೀಪ್ ಎನ್ನುವ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
 
ಕಳೆದ ಸೆಪ್ಟೆಂಬರ್ 12 ರಂದು ಬಿಜೆಪಿ ಶಾಸಕ ಕಪಿಲ್ ಅಗರ್ವಾಲ್, ತಮ್ಮ ಕಚೇರಿಯಲ್ಲಿ ಜನ ಸಂಪರ್ಕ ಸಭೆ ನಡೆಸಿದ್ದಾಗ ಮೂವರು ಯುವಕರು ಅವರ ಮೇಲೆ ಮೆಣಸಿನ ಪುಡಿ ಎರಚಿದ್ದರು. ಇದರಿಂದಾಗಿ ಶಾಸಕ ಕಪಿಲ್ ದೇವ್ ಕಣ್ಣುರಿಯಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ವಿಚಾರಣೆ: ನಾರಿಮನ್ ಭೇಟಿಯಾದ ಸಿಎಂ ಸಿದ್ದರಾಮಯ್ಯ