Select Your Language

Notifications

webdunia
webdunia
webdunia
webdunia

ಇನ್ನಷ್ಟು ಬ್ಯಾಂಕುಗಳ ವಿಲೀನಗೊಳಿಸಲಿದೆಯಾ ಕೇಂದ್ರ ಸರ್ಕಾರ?

ಇನ್ನಷ್ಟು ಬ್ಯಾಂಕುಗಳ ವಿಲೀನಗೊಳಿಸಲಿದೆಯಾ ಕೇಂದ್ರ ಸರ್ಕಾರ?
ನವದೆಹಲಿ , ಸೋಮವಾರ, 10 ಫೆಬ್ರವರಿ 2020 (06:53 IST)
ನವದೆಹಲಿ : ಈಗಾಗಲೇ ಸರ್ಕಾರಿ ಸ್ವಮ್ಯದ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಇನ್ನಷ್ಟು ಬ್ಯಾಂಕುಗಳನ್ನು ವಿಲೀನ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು, ನಾವು ಬ್ಯಾಂಕುಗಳ ವಿಲೀನ ಮತ್ತು ಮರುಬಂಡವಾಳ ಪೂರಣ ಕಾರ್ಯ ಯಶಸ್ವಿಯಾಗಿ ಮಾಡಿದ್ದೇವೆ. ದಿವಾಳಿ ಸಂಹಿತೆ ಕೂಡ ಯಶಸ್ವಿಯಾಗಿದ್ದು, ಇದರಿಂದಾಗಿ ಬ್ಯಾಂಕುಗಳಿಗೆ 4 ಲಕ್ಷ ಕೋಟಿಗಿಂತ ಹೆಚ್ಚು ಹಣ ವಾಪಾಸ್ ಬರಲು ಸಾಧ್ಯವಾಗಿದೆ. ಆದ್ದರಿಂದ ಅಗತ್ಯಬಿದ್ದರೆ ಇನ್ನಷ್ಟು ವಿಲೀನ ಕಾರ್ಯ ಮಾಡುತ್ತೇವೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ಚಪಾತಿ ಸೇವಿಸುವುದು ಉತ್ತಮವೇ?