Select Your Language

Notifications

webdunia
webdunia
webdunia
webdunia

ಹಿರಿಯ ಸಚಿವರಿಗೆ ಕೊಕ್ ನೀಡುವ ಹಿಂದಿದೆ ಮೋದಿ ತಂತ್ರ!

ಹಿರಿಯ ಸಚಿವರಿಗೆ ಕೊಕ್ ನೀಡುವ ಹಿಂದಿದೆ ಮೋದಿ ತಂತ್ರ!
ನವದೆಹಲಿ , ಶನಿವಾರ, 10 ಜುಲೈ 2021 (08:47 IST)
ನವದೆಹಲಿ: ಪ್ರಧಾನಿ ಮೋದಿ ತಮ್ಮ ಕ್ಯಾಬಿನೆಟ್ ನಲ್ಲಿ ಹಿರಿಯ ಸಚಿವರಿಗೆ ಕೊಕ್ ನೀಡಿದ್ದು ಎಲ್ಲರಿಗೂ ಅಚ್ಚರಿಯಾಗಿತ್ತು. ಆದರೆ ಇದರ ಹಿಂದೆ ಬೇರೆಯದೇ ಕಾರ್ಯತಂತ್ರವಿದೆ ಎನ್ನಲಾಗಿದೆ.


ಮುಂದಿನ ವರ್ಷ ನಡೆಯಲಿರವು ಕೆಲವು ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಈ ಹಿರಿಯ ಸಚಿವರನ್ನು ಉಸ್ತುವಾರಿಗಳಾಗಿ ನೇಮಕ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಕ್ಕಾಗಿಯೇ ಹಿರಿಯ ಸಚಿವರಿಗೆ ಕೊಕ್ ನೀಡಲಾಗಿದೆ ಎನ್ನಲಾಗಿದೆ.

ಸ್ವತಃ ಮೋದಿಯೇ ಈ ಬಗ್ಗೆ ಸುಳಿವು ನೀಡಿದ್ದು, ರವಿಶಂಕರ್ ಪ್ರಸಾದ್ ರಂತಹ ಹಿರಿಯ ಸಚಿವರನ್ನು ಕಳಪೆ ಸಾಧನೆ ಹಿನ್ನಲೆಯಲ್ಲಿ ಕೈ ಬಿಡಲಾಗಿಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಇವರಿಗೆ ಪಕ್ಷದ ಮಹತ್ವದ ಹೊಣೆಗಾರಿಕೆ ನೀಡಲಾಗುವುದು ಎಂದಿದ್ದಾರೆ. ಈ ಮೂಲಕ ಬೇರೆ ಬೇರೆ ರಾಜ್ಯಗಳ ಚುನಾವಣೆ ಉಸ್ತುವಾರಿ ಈ ಹಿರಿಯರ ಪಾಲಾಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಪ್ರಿಯರಿಗೊಂದು ಗುಡ್ ನ್ಯೂಸ್!