Select Your Language

Notifications

webdunia
webdunia
webdunia
webdunia

ಸಂಸದ ಗೋರಂಟ್ಲ ಮಾಧವ್ ಪೊಲೀಸರ ಬೂಟಿಗೆ ಮುತ್ತಿಟ್ಟಿದ್ದು ಯಾಕೆ?

ಸಂಸದ ಗೋರಂಟ್ಲ ಮಾಧವ್ ಪೊಲೀಸರ ಬೂಟಿಗೆ ಮುತ್ತಿಟ್ಟಿದ್ದು ಯಾಕೆ?
ಆಂಧ್ರಪ್ರದೇಶ , ಶನಿವಾರ, 21 ಡಿಸೆಂಬರ್ 2019 (11:31 IST)
ಆಂಧ್ರಪ್ರದೇಶ: ಪೊಲೀಸರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮಾಜಿ ಸಂಸದ ಜೆಸಿ ದಿವಾಕರ್ ರೆಡ್ಡಿಗೆ ವೈಎಸ್ ಆರ್ ಸಿಪಿ ನಾಯಕ ಹಾಗೂ ಹಿಂದೂಪುರದ ಸಂಸದ ಗೋರಂಟ್ಲ ಮಾಧವ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.



ಆಂಧ್ರಪ್ರದೇಶದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪೊಲೀಸರ ನಾಲಿಗೆಯಿಂದ ನನ್ನ ಬೂಟುಗಳನ್ನು ನೆಕ್ಕುವಂತೆ ಮಾಡುತ್ತೇನೆ ಎಂದು ತೆಲುಗು ದೇಶಂ ಪಕ್ಷದ ನಾಯಕ ಮಾಜಿ ಸಂಸದ ಜೆಸಿ ದಿವಾಕರ್ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು.


ಇದೀಗ ಜೆಸಿ ದಿವಾಕರ್ ರೆಡ್ಡಿ ಈ ಹೇಳಿಕೆಗೆ ಪೊಲೀಸರ ಬೂಟಿಗೆ ಮುತ್ತು ಕೊಡುವುದರ ಮೂಲಕ ತಿರುಗೇಟು ನೀಡಿದ ಸಂಸದ ಗೋರಂಟ್ಲ ಮಾಧವ್, ಪೊಲೀಸರು ದೇಶದ ಸಾರ್ವಭೌಮತೆ ಮತ್ತು ಏಕತೆಯನ್ನು ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರಿಗೆ ನಾವು ಗೌರವ ನೀಡಲೇಬೇಕು. ಎಲ್ಲ ಪೊಲೀಸರು ಒಂದೇರೀತಿ ಇರುವುದಿಲ್ಲ. ದೇಶದ ಅನೇಕ ಪೊಲೀಸರು ಬದ್ಧತೆಯನ್ನು ಕೆಲಸ ಮಾಡುತ್ತಾರೆ ಎಂದು ಜೆಸಿ ದಿವಾಕರ್ ನೆನಪಿನಲ್ಲಿಟ್ಟುಕೊಂಡಿರಬೇಕು ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿಗೆ ತೆರಳಿ ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸುತ್ತೇನೆ-ಸಿಎಂ