Webdunia - Bharat's app for daily news and videos

Install App

ಪ್ರಧಾನಿ ಮೋದಿ ಸ್ಮರಿಸಿದ 'ಆಡಿಟರ್ ರಮೇಶ್' ಯಾರು

Sampriya
ಮಂಗಳವಾರ, 19 ಮಾರ್ಚ್ 2024 (19:00 IST)
Photo Courtesy Facebook
ಸೇಲಂ: ನಡೆದ ರ್ಯಾಲಿಯಲ್ಲಿ 2013ರಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತನನ್ನು ನೆನೆದು ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ಕ್ಷಣ ಭಾವುಕರಾಗಿ ಭಾಷಣವನ್ನು ನಿಲ್ಲಿಸಿದರು. ಈ ವೇಳೆ  ಮೋದಿ ಮೋದಿ ಎಂದು ಘೋಷಣೆಯನ್ನು ಜನರಿಂದ ಮೊಳಗಿತು.
 
ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ತಮಿಳುನಾಡಿನ ಸೇಲಂನಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ಬಿಜೆಪಿ ನಾಯಕ ಕೆಎನ್ ಲಕ್ಷ್ಮಣನ್ ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ಮೂವರು ವ್ಯಕ್ತಿಗಳನ್ನು ಸ್ಮರಿಸಿದರು.
 
ಈ ವೇಳೆ ಆಡಿಟರ್ ರಮೇಶ್ ಬಗ್ಗೆ ಮಾತನಾಡುವಾಗ ಕೆಲ ಕ್ಷಣ ಭಾವುಕರಾದರು.
 
"ಇಂದು, ನಾನು ಆಡಿಟರ್ ರಮೇಶ್ ಅವರನ್ನು ನೆನಪಿಸಿಕೊಳ್ಳುತ್ತೇನೆ" ಎಂದು ಪ್ರಧಾನಿ ಮೋದಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ತಮ್ಮ ಭಾಷಣವನ್ನು ವಿರಾಮಗೊಳಿಸಿದರು. ಕೆಲವು ಸೆಕೆಂಡ್‌ಗಳ ಕಾಲ ಮೌನಕ್ಕೆ ಶರಣಾದ ಪ್ರೇಕ್ಷಕರು ನಂತರ ಮೋದಿಯವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು.
 
ತಮ್ಮ ಭಾಷಣವನ್ನು ಪುನರಾರಂಭಿಸಿದ ಪ್ರಧಾನಿ ಮೋದಿ, "ದುರದೃಷ್ಟವಶಾತ್  ರಮೇಶ್ ನಮ್ಮ ನಡುವೆ ಇಲ್ಲ" ಎಂದು ಹೇಳಿದರು.
 
ಉತ್ತಮ ವಾಗ್ಮಿಯಾಗಿದ್ದ ರಮೇಶ್ ಅವರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದರು. ದುಷ್ಕರ್ಮಿಗಳಿಂದ ಅವರು ಕೊಲ್ಲಲ್ಪಟ್ಟರು ಎಂದು ಅವರು ದಿವಂಗತ ಬಿಜೆಪಿ ನಾಯಕನಿಗೆ ಈ ವೇಳೆ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments