Select Your Language

Notifications

webdunia
webdunia
webdunia
webdunia

ಪ್ರಾಣ ಭಿಕ್ಷೆಗಾಗಿ ಆತ ಅಂಗಲಾಚುತ್ತಿದ್ದರೆ, ಸಾರ್ವಜನಿಕರು ಫೋಟೋ ತೆಗೆಯುತ್ತಿದ್ದರು!

ಪ್ರಾಣ ಭಿಕ್ಷೆಗಾಗಿ ಆತ ಅಂಗಲಾಚುತ್ತಿದ್ದರೆ, ಸಾರ್ವಜನಿಕರು ಫೋಟೋ ತೆಗೆಯುತ್ತಿದ್ದರು!
Pune , ಶುಕ್ರವಾರ, 21 ಜುಲೈ 2017 (12:40 IST)
ಪುಣೆ: ಅಪಘಾತವಾದಾಗ ತಕ್ಷಣ ಆಸ್ಪತ್ರೆಗೆ ಸೇರಿಸಬೇಕೆಂದು ಪೊಲೀಸರು, ಸರ್ಕಾರ  ಅದೆಷ್ಟೇ ಯೋಜನೆಗಳು, ಸಲಹೆಗಳನ್ನು ನೀಡಿದರೂ, ಜನ ಸಾಮಾನ್ಯರು ಮಾತ್ರ ಬದಲಾಗಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.


ಪುಣೆ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದ ಯುವಕನೊಬ್ಬ ವಿಪರೀತ ರಕ್ತಸ್ರಾವದಿಂದಾಗಿ ಪ್ರಾಣ ಹೋಗುವ ಹಂತದಲ್ಲಿದ್ದರೆ, ಅಕ್ಕಪಕ್ಕದವರು ಸಹಾಯ ಮಾಡುವುದು ಬಿಟ್ಟು, ಫೋಟೋ ತೆಗೆಯುತ್ತಿದ್ದ ಹೇಯ ಕೃತ್ಯ ವರದಿಯಾಗಿದೆ. ಸಾರ್ವಜನಿಕರ ಈ ಬೇಜವಬ್ದಾರಿಯುತ ವರ್ತನೆಯಿಂದಾಗಿ ಆತನ ಪ್ರಾಣವೇ ಹೋಗಿದೆ.

ಸತೀಶ್ ಪ್ರಭಾಕರ್ (25) ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು. ಭೋಸಾರಿ ಬಳಿ ರಸ್ತೆ ಬದಿ ಅಪಘಾತಕ್ಕೀಡಾಗಿದ್ದರು. ತೀವ್ರ ರಕ್ತಸ್ರಾವದಿಂದಾಗಿ ಒದ್ದಾಡುತ್ತಿದ್ದ ಅವರನ್ನು ನೋಡಲು ಸುತ್ತಲೂ ಜನ ಸೇರಿದ್ದರೇ ಹೊರತು ಯಾರೂ ಆಸ್ಪತ್ರೆಗೆ ಸಾಗಿಸಲಿಲ್ಲ. ಕೊನೆಗೆ ಅಲ್ಲೇ ಪಕ್ಕದಲ್ಲಿದ್ದ ದಂತ ವೈದ್ಯರೊಬ್ಬರು ಆಸ್ಪತ್ರೆಗೆ ದಾಖಲಿಸಿದರೂ, ಜೀವ ಉಳಿಸಲಾಗಲಿಲ್ಲ. ಇದೊಂದು ಹಿಟ್ ಆಂಡ್ ರನ್ ಕೇಸ್ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತ್ಯೇಕ ನಾಡಧ್ವಜ ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುನಿಸು?