Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯನ್ನು ಆಕಾಶಕ್ಕೆ ಹೋಲಿಸಿ ಗುಣಗಾನ ಮಾಡಿದ ಕೇಜ್ರಿವಾಲ್

ಪ್ರಧಾನಿ ಮೋದಿಯನ್ನು ಆಕಾಶಕ್ಕೆ ಹೋಲಿಸಿ ಗುಣಗಾನ ಮಾಡಿದ ಕೇಜ್ರಿವಾಲ್
ನವದೆಹಲಿ , ಸೋಮವಾರ, 3 ಅಕ್ಟೋಬರ್ 2016 (15:47 IST)
ಪಾಕಿಸ್ತಾನದ ಆಕ್ರಮಿತ ಕಾಶ್ಮಿರ ಪ್ರದೇಶದಲ್ಲಿರುವ ಉಗ್ರರ ಶಿಬಿರಗಳ ಮೇಲೆ ದಾಳಿ ಸೀಮಿತ ದಾಳಿ ನಡೆಸಲು ಆದೇಶ ನೀಡಿದ ಪ್ರಧಾನಿ ಮೋದಿ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಭಿನಂಧನೆ ಸಲ್ಲಿಸಿದ್ದಾರೆ.
 
ಪ್ರಧಾನಿ ಮೋದಿಯೊಂದಿಗೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದಾಗ್ಯೂ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಧಾರಕ್ಕೆ ಅವರನ್ನು ಅಭಿನಂದಿಸಲೇಬೇಕಾಗಿದೆ ಎಂದು ಹೇಳಿದ್ದಾರೆ.
 
ಪ್ರಧಾನಿ ಮೋದಿಯವರ ಕಟು ಟೀಕಾಕಾರ ಎನ್ನುವ ಕುಖ್ಯಾತಿ ಹೊಂದಿದ್ದ ಕೇಜ್ರಿವಾಲ್, ಇದೀಗ ಮೋದಿಯವರನ್ನು ಹೊಗಳುವ ಮೂಲಕ ಹೊಸ ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ.
 
ಸೀಮಿತ ದಾಳಿಯ ಬಗ್ಗೆ ಪಾಕಿಸ್ತಾನದ ಸೇನೆಯ ಸುಳ್ಳು ಆರೋಪಗಳ ಹಿಂದಿರುವ ಸತ್ಯವನ್ನು ಬಹಿರಂಗಗೊಳಿಸುವಂತೆ ಮೋದಿಯವರನ್ನು ಕೋರಿದ್ದಾರೆ. 
 
ಕಳೆದ ಗುರುವಾರದಂದು, ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮಿರದೊಳಗೆ ನುಗ್ಗಿ 45 ಕ್ಕೂ ಹೆಚ್ಚು ಉಗ್ರರ ಮಾರಣಹೋಮ ನಡೆಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿಯಿಂದ ದೂರ ಉಳಿದ ಮಂಡ್ಯದ ಗಂಡು ಅಂಬರೀಶ!