ಹೆಚ್ಚಿನ ಸಂದರ್ಭದಲ್ಲಿ ಶಿವಸೇನೆಯೇ, ತನ್ನ ಮುಖವಾಣಿ 'ಸಾಮ್ನಾ' ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತದೆ. ಆದರೆ ಈ ಬಾರಿ ಬಿಜೆಪಿ ಅದಕ್ಕಿಂತ ಜೋರಾಗಿ ಪ್ರತಿದಾಳಿ ನಡೆಸಿದೆ. ತಮ್ಮ ಜತೆಗಿನ ಬಂಧಕ್ಕೆ ಯಾವಾಗ ತಲಾಖ್ ನೀಡುತ್ತೀರಿ ಎಂದು ಕಮಲ ಪ್ರಶ್ನಿಸಿದೆ.
ಅನೇಕ ವರ್ಷಗಳಿಂದ ಮೈತ್ರಿಯನ್ನು ಹೊಂದಿರುವ ಬಿಜೆಪಿ ಮತ್ತು ಶಿವಸೇನೆಯಲ್ಲಿ ಹಿಂದಿನಂತೆ ಈಗ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಮಹಾರಾಷ್ಟ್ರ ಮತ್ತು ಕೇಂದ್ರದಲ್ಲೆರಡು ಕಡೆ ಸರ್ಕಾರದಲ್ಲಿ ಪಾಲುದಾರರಾಗಿದ್ದರೂ ಪರಷ್ಪರ ವಾಗ್ದಾಳಿ ನಡೆಸುವ ಅವಕಾಶವನ್ನು ಎರಡು ಪಕ್ಷಗಳು ಮಿಸ್ ಮಾಡಿಕೊಳ್ಳಲಾರವು. ಇತ್ತೀಚಿಗೆ ನಡೆದ ಪಕ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಕಳೆದುಕೊಳ್ಳುವ ಮಾತುಗಳನ್ನಾಡಿದ ಶಿವಸೇನೆಗೆ ಬಿಜೆಪಿ ಈಗ ಖಡಕ್ ಪ್ರತ್ಯುತ್ತರ ನೀಡಿದೆ. ಮೈತ್ರಿಯನ್ನು ಯಾವಾಗ ಮುರಿದುಕೊಳ್ಳುತ್ತೀರಿ ಎಂದು ಬಿಜೆಪಿ ಸೇನೆಗೆ ಸವಾಲು ಹಾಕಿದೆ.
ಮಹಾರಾಷ್ಟ್ರ ಬಿಜೆಪಿಯ ಪಾಕ್ಷಿಕ "ಮನೋಗತ್"ನಲ್ಲಿ, ಪಕ್ಷದ ರಾಜ್ಯ ವಕ್ತಾರ ಮಾಧವ್ ಭಂಡಾರಿ , ನೀವು ಯಾವಾಗ ತಲಾಖ್ ತೆಗೆದುಕೊಳ್ಳುತ್ತೀರಿ ರಾವತ್? ಎಂಬ ಶೀರ್ಷಿಕೆಯಡಿ ಒಂದು ಲೇಖನವನ್ನು ಬರೆದಿದ್ದಾರೆ.
ಸಾಮ್ನಾದ ಮೂಲಕ ಬಿಜೆಪಿ ವಿರುದ್ಧ ಹರಿಹಾಯುವ ಶಿವಸೇನೆಯ ನಿಲುವನ್ನು ಅವರು ಈ ಲೇಖನದ ಮೂಲಕ ಖಂಡಿಸಿದ್ದಾರೆ.
ಔರಂಗಾಬಾದ್ನ ಶಿವಸೇನಾ ಸಂಸದ ಮತ್ತು ಸಂಜಯ್ ರಾವತ್ ಇತ್ತೀಚಿಗೆ ಬಿಜೆಪಿ ಆಡಳಿತವನ್ನು ನಿಜಾಮರ ಆಡಳಿತಕ್ಕೆ ಹೋಲಿಸಿದ್ದರು.