Select Your Language

Notifications

webdunia
webdunia
webdunia
webdunia

ತಿಂಡಿ ಆಸೆಗೆ ಹೋದ ಬಾಲಕರಿಗೆ ಅಂಗಡಿ ಮಾಲಿಕ ಕೊಟ್ಟ ಶಿಕ್ಷೆ ಎಂತಹದ್ದು ಗೊತ್ತಾ?!

ತಿಂಡಿ ಆಸೆಗೆ ಹೋದ ಬಾಲಕರಿಗೆ ಅಂಗಡಿ ಮಾಲಿಕ ಕೊಟ್ಟ ಶಿಕ್ಷೆ ಎಂತಹದ್ದು ಗೊತ್ತಾ?!
Thane , ಮಂಗಳವಾರ, 23 ಮೇ 2017 (09:04 IST)
ಥಾಣೆ: ಬಾಯಲ್ಲಿ ನೀರೂರಿಸುವ ತಿಂಡಿಗಳನ್ನು ಅಂಗಡಿಯಲ್ಲಿ ಜೋಡಿಸಿಟ್ಟುಕೊಂಡುವುದನ್ನು ನೋಡುವಾಗ ಯಾರೇ ಆಗಲಿ ಒಮ್ಮೆ ಬಾಯಲ್ಲಿ ನೀರೂರುವುದು ಸಹಜ. ಈ ಇಬ್ಬರು ಮಕ್ಕಳು ಆಸೆ ತಡೆಯಲಾಗದೆ ತಿಂಡಿ ಕದ್ದಿದ್ದಕ್ಕೆ ದೊಡ್ಡ ಶಿಕ್ಷೆಯನ್ನೇ ಅನುಭವಿಸಬೇಕಾಯಿತು.

 
ಮಹಾರಾಷ್ಟ್ರದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 8 ಮತ್ತು 9 ವರ್ಷದ ಬಾಲಕರಿಬ್ಬರಿಗೆ ಅಂಗಡಿಯೊಂದರಲ್ಲಿ ಜೋಡಿಸಿದ್ದ ಸಿಹಿ ತಿನಿಸುಗಳನ್ನು ನೋಡಿ ಆಸೆಯಾಗಿತ್ತು. ಆದರೆ ಕೊಳ್ಳಲು ಹಣವಿಲ್ಲ.

ಹೀಗಾಗಿ ಅಂಗಡಿ ಮಾಲಿಕರಿಗೆ ಗೊತ್ತಾಗದ ಹಾಗೆ ಒಂದು ತಿಂಡಿ ಪೊಟ್ಟಣವನ್ನು ಎತ್ತಿಕೊಂಡು ತಿಂದು ಮುಗಿಸಿದ್ದರು. ಅವರ ಈ ತಪ್ಪಿಗೆ ಅಂಗಡಿ ಮಾಲಿಕ ಮೆಹಮೂದ್ ಪಠಾಣ್ ತನ್ನಿಬ್ಬರು ಪುತ್ರರೊಂದಿಗೆ ಸೇರಿಕೊಂಡು ಮಕ್ಕಳ ಕೇಶಮುಂಡನ ಮಾಡಿಸಿದರು.

ಅಷ್ಟಕ್ಕೇ ಸುಮ್ಮನಾಗದೇ ಚಪ್ಪಲಿ ಹಾರ ಹಾಕಿ ಬೀದಿಯಲ್ಲಿ ಮೆರವಣಿಗೆ ಮಾಡಿದರು. ಇದರಿಂದ ತೀವ್ರ ಆಕ್ರೋಶಗೊಂಡ ಬಾಲಕರ ಪೋಷಕರು ಪೊಲೀಸರಿಗೆ ದೂರು ನೀಡಿದರು. ಅದರಂತೆ ಮಾಲಿಕರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪರಸ್ಪರ ಮೂತ್ರಪಿಂಡ ವಿನಿಮಯ ಮಾಡಿಕೊಂಡ ಹಿಂದೂ-ಮುಸ್ಲಿಂ ದಂಪತಿಗಳು