Publish Date: Tue, 27 Jun 2023 (13:19 IST)
Updated Date: Tue, 27 Jun 2023 (13:22 IST)
ಶೋಭನದ ಕೋಣೆಯಲ್ಲಿದ್ದ ವರ ಎಷ್ಟು ಬಾರಿ ಬಾಗಿಲು ಬಡಿದರೂ ಉತ್ತರಿಸಿಲ್ಲ. ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಆಗ ವಧು ಮಾಹಿತಿಯನ್ನು ಮನೆಯವರಿಗೆ ಮಾಹಿತಿ ತಿಳಿಸಿದ್ದಾಳೆ.
ಅದು ಮೊದಲ ರಾತ್ರಿಯ ಸುಸಂದರ್ಭ, ಕುಟುಂಬ ಸದಸ್ಯರು ನವ ವಧುವನ್ನು ಹಾಲಿನ ಲೋಟದೊಂದಿಗೆ ಶೋಭನದ ಕೋಣೆಗೆ ಸಿಂಗಾರಗೊಂಡ ನವ ವಧುವನ್ನು ಕಳುಹಿಸುತ್ತಾರೆ.
ಸೀನ್ ಕಟ್ ಮಾಡಿದರೆ.. ಎಷ್ಟು ಬಾರಿ ಬಾಗಿಲು ತಟ್ಟಿದರೂ.. ವರ ಮಹಾಶಯ ಇರುವ ಕೊಠಡಿಯ ಒಳಗಿಂದ ಪ್ರತಿಕ್ರಿಯೆ ಎಂಬುದೇ ಇಲ್ಲ. ಕೂಡಲೇ ಸಂಬಂಧಿಕರಿಗೆ ವಿಷಯ ಮುಟ್ಟಿಸುತ್ತಾಳೆ ನವ ವಧು. ಉಳಿದವರೆಲ್ಲಾ ಓಡೋಡಿಬಂದು ನೋಡಿದಾಗ.. ಎದುರಿಗಿದ್ದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಮಚರಿಯಾ ಗ್ರಾಮದ ಮನೋಜ್ ಯಾದವ್ ಎಂಬ ಯುವಕ ಮೇ 26 ರಂದು ಗೋಲ್ಡ್ ಎಂಬ ಯುವತಿಯನ್ನು ವಿವಾಹವಾದರು. ಮೇ 28ರಂದು ಕುಟುಂಬಸ್ಥರು ಶೋಭನಕ್ಕೆ ಶುಭ ಮುಹೂರ್ತ ನಿಗದಿ ಮಾಡಿದ್ದಾರೆ. ಸಂಪ್ರದಾಯದಂತೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬ ಸದಸ್ಯರು ರಾತ್ರಿ 10 ಗಂಟೆ ಸುಮಾರಿಗೆ ವಧುವನ್ನು ಶೋಭನದ ಕೋಣೆಗೆ ಕಳುಹಿಸಿದ್ದಾರೆ.