Select Your Language

Notifications

webdunia
webdunia
webdunia
webdunia

ಗಂಡನ ಪರವಾಗಿ ಸಿಎಂ ಕೇಜ್ರಿವಾಲ್ ಪತ್ನಿ ಹೇಳಿದ್ದೇನು?

ಗಂಡನ ಪರವಾಗಿ ಸಿಎಂ ಕೇಜ್ರಿವಾಲ್  ಪತ್ನಿ ಹೇಳಿದ್ದೇನು?
NewDelhi , ಮಂಗಳವಾರ, 9 ಮೇ 2017 (09:09 IST)
ನವದೆಹಲಿ: ದೆಹಲಿ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಲಂಚ ಪ್ರಕರಣದ ಬಗ್ಗೆ ಸಿಎಂ ಕೇಜ್ರಿವಾಲ್ ಮೌನ ವಹಿಸಿದ್ದಾರೆ. ಆದರೆ ಅವರ ಪತ್ನಿ ಸುನಿತಾ ಪತಿ ಪರ ಬ್ಯಾಟಿಂಗ್ ಮಾಡಿದ್ದಾರೆ.

 
ಕಪಿಲ್ ಮಿಶ್ರಾ ಆರೋಪಿಸಿದಂತೆ ಕೇಜ್ರಿವಾಲ್ ತಮ್ಮ ಬಾವನಿಗೆ ಅನುಕೂಲ ಮಾಡಿಕೊಡಲು ಲಂಚ ಪಡೆದಿದ್ದರು. ಆದರೆ ಅವರು ಹೇಳಿದ ಆ ವ್ಯಕ್ತಿ ಈಗ ಬದುಕಿಯೇ ಇಲ್ಲ. ಹಾಗಿರುವಾಗ ಲಂಚದ ಮಾತೆಲ್ಲಿ ಬಂತು?

ಈ ಮನುಷ್ಯ ತಲೆಬುಡವಿಲ್ಲದೆ ಬಾಯಿಗೆ ಬಂದಂತೆ ಹೇಳುತ್ತಿದ್ದಾರೆ ಎಂದು ಸುನಿತಾ ತಮ್ಮ ಟ್ವಿಟರ್ ಖಾತೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕಪಿಲ್ ಮಿಶ್ರಾ ಉಲ್ಲೇಖಿಸಿದ ಸಂಬಂಧಿ ಖಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ.

ಇದೇ ವ್ಯಕ್ತಿಗಾಗಿ 50 ಕೋಟಿ ರೂ. ಮೊತ್ತ ಭೂ ಹಗರಣ ನಡೆಸಿದ್ದರು ಎಂದು ಸತ್ಯೇಂದ್ರ ಜೈನ್ ಹೇಳಿದ್ದಾರೆಂದು ಕಪಿಲ್ ಮಿಶ್ರಾ ಆರೋಪಿಸಿದ್ದರು. ಆದರೆ ಇದೆಲ್ಲಾ ಸತ್ಯಕ್ಕೆ ದೂರವಾದುದು. ಕಪಿಲ್ ಮಿಶ್ರಾ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಸುನೀತಾ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಕೆ.ಸಿ. ವೇಣುಗೋಪಾಲ್`ಗೆ ಎಚ್. ವಿಶ್ವನಾಥ್ ಪತ್ರ