Select Your Language

Notifications

webdunia
webdunia
webdunia
webdunia

ಗೂಂಡಾ ವ್ಯಕ್ತಿಗಳಿಂದ ಪಕ್ಷವನ್ನು ಕಾಪಾಡಬೇಕಾಗಿದೆ: ಎಐಎಡಿಎಂಕೆ ಅಧ್ಯಕ್ಷ

ಶಶಿಕಲಾ ನಟರಾಜನ್
ಚೆನ್ನೈ , ಗುರುವಾರ, 9 ಫೆಬ್ರವರಿ 2017 (14:10 IST)
ಗೂಂಡಾ ವ್ಯಕ್ತಿಗಳಿಂದ ಪಕ್ಷವನ್ನು ಕಾಪಾಡಬೇಕಾಗಿರುವುದರಿಂದ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ಎಐಎಡಿಎಂಕೆ ಅಧ್ಯಕ್ಷ ಮಧುಸೂದನ್ ಹೇಳಿದ್ದಾರೆ.
 
ನಗರದ ಗ್ರೀನ್‌ವೇಸ್‌ನಲ್ಲಿರುವ ಸಿಎಂ ಸೆಲ್ವಂ ನಿವಾಸಕ್ಕೆ ಭೇಟಿ ನೀಡಿದ ಮಧುಸೂಧನ, ಸಿಎಂ ಆಗಲು ಶಶಿಕಲಾ ಕೀಳು ಮಟ್ಟದ ರಾಜಕೀಯ ಪ್ರದರ್ಶಿಸುತ್ತಿದ್ದಾರೆ. ಶಶಿಕಲಾರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಂತೆ ದಿವಂಗತ ನಾಯಕಿ ಜಯಲಲಿತಾ ಸಲಹೆ ನೀಡಿದ್ದರು ಎಂದು ತಿಳಿಸಿದ್ದಾರೆ.
 
ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಇಂದು ಎಐಎಡಿಎಂಕೆ ಅಧ್ಯಕ್ಷ ಡಿ. ಮಧುಸೂಧನ್ ಸಿಎಂ ಸೆಲ್ವಂ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ.
 
ಜಯಲಲಿತಾ ಜೀಲಂತವಾಗಿದ್ದಾಗ ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ರಾಜಕೀಯಕ್ಕೆ ಬರುವುದಿಲ್ಲ ಎಂದು ಶಶಿಕಲಾ ಹೇಳಿಕೆ ನೀಡಿದ್ದರು. ಇದೀಗ ಜಯಲಲಿತ ನಿಧನದ ನಂತರ ರಾಜಕೀಯ ಲಾಭ ಪಡೆಯಲು ಕಳಪೆ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಶಶಿಕಲಾ ಸಿಎಂ ಆದ್ರೆ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾದಂತಾಗುತ್ತದೆ. ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತದೆ ಎಂದು ಸಿಎಂ ಪನ್ನೀರ್ ಸೆಲ್ವಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನನ್ನು ಹೊಡೆದುಹಾಕಿದ್ರೆ ಯಾರು ಹೊಣೆ: ಶಾಸಕ ವಿಶ್ವನಾಥ್