Webdunia - Bharat's app for daily news and videos

Install App

ವಯನಾಡು ಗುಡ್ಡು ಕುಸಿತ: ಪ್ರವಾಹ ಈಜಿ ಬಂದವರಿಗೆ ಎದುರಾಯ್ತು ಕಾಡಾನೆ, ನಮಗೇನೂ ಮಾಡಬೇಡ ಎಂದು ಕೈ ಮುಗಿದ ಅಜ್ಜಿ

Krishnaveni K
ಶನಿವಾರ, 3 ಆಗಸ್ಟ್ 2024 (10:33 IST)
ವಯನಾಡು: ವಯನಾಡು ಗುಡ್ಡ ಕುಸಿತದ ಬಗ್ಗೆ ಒಂದೊಂದೇ ಕತೆಗಳು ಹೊರಬೀಳುತ್ತಿವೆ. ಪ್ರವಾಹದಲ್ಲಿ ಈಜಿ ಪವಾಡಸದೃಶವಾಗಿ ಬಚಾವ್ ಆದ ಅಜ್ಜಿ ಮತ್ತು ಕುಟುಂಬದ ಕತೆ ರೋಚಕವಾಗಿದೆ.

ಗುಡ್ಡ ಕುಸಿತದಿಂದಾಗಿ ಪ್ರವಾಹ ಮನೆಗೆ ನುಗ್ಗಿ ಬಂದಾಗ ಓರ್ವ ಅಜ್ಜಿ ತನ್ನ ಮಗಳು, ಅಳಿಯ ಮತ್ತು ಮೊಮ್ಮಗನೊಂದಿಗೆ ಪ್ರವಾಹದಲ್ಲಿ ಈಜಿ ಗುಡ್ಡವೊಂದನ್ನು ತಲುಪಿದ್ದರು. ಈ ವೇಳೆ ಅವರೆಲ್ಲರಿಗೂ ಮೈಯೆಲ್ಲಾ ಗಾಯವಾಗಿತ್ತು. ಆದರೂ ಪ್ರಾಣಕ್ಕೆ ತೊಂದರೆಯಿರಲಿಲ್ಲ.

ಅಂತೂ ಸುರಕ್ಷಿತ ಸ್ಥಳಕ್ಕೆ ಬಂದೆವು ಎಂದು ನಿಟ್ಟುಸಿರಿಟ್ಟರೆ ಎದುರಿಗೆ ಕಾಡಾನೆಯಿತ್ತು. ಕಾಡಾನೆಗಳು ಮನುಷ್ಯರನ್ನು ಕಂಡರೆ ಹಿಂದೆ ಮುಂದೆ ನೋಡದೇ ತುಳಿದು ಹಾಕುತ್ತವೆ. ಹೀಗಾಗಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು ಅಜ್ಜಿ ಮತ್ತು ಮಕ್ಕಳ ಕತೆ. ಆದರೆ ಕಾಡಾನೆಯ ಮುಂದೆ ನಿಂತ ಅಜ್ಜಿ ಕೈ ಮುಗಿದು ಹೇಗೋ ಕಷ್ಟಪಟ್ಟು ಬಹುದೊಡ್ಡ ದುರಂತದಿಂದ ಪಾರಾಗಿ ಬಂದಿದ್ದೇವೆ. ದಯವಿಟ್ಟು ನಮಗೆ ತೊಂದರೆ ಮಾಡಬೇಡ ಎಂದು ಕೈ ಮುಗಿದು ಕೇಳಿದರಂತೆ. ಅಜ್ಜಿ ಕಣ್ಣೀರು ಸುರಿಸುತ್ತಿರುವುದನ್ನು ನೋಡಿ ಆನೆಗೂ ಕಣ್ಣಲ್ಲಿ ನೀರು ಬಂತಂತೆ.

ವಿಶೇಷವೆಂದರೆ ಆ ಆನೆಯ ಕಾಲಬುಡದಲ್ಲೇ ಮಳೆಯಲ್ಲಿ ಅಜ್ಜಿ, ಮೊಮ್ಮಗಳು ಮಲಗಿ ರಾತ್ರಿ ಕಳೆದಿದ್ದಾರೆ. ಬಳಿಕ ಯಾರೋ ಬಂದು ರಕ್ಷಣೆ ಮಾಡುವವರೆಗೂ ಆ ಆನೆ ಅವರಿಗೆ ಏನೂ ಮಾಡಲಿಲ್ಲವಂತೆ. ಆ ದೇವರೇ ಆನೆಯ ರೂಪದಲ್ಲಿ ಬಂದು ನಮ್ಮನ್ನು ರಕ್ಷಣೆ ಮಾಡಿದ್ದಾರೆ ಎಂದು ಅಜ್ಜಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರು ಹೇಳಿದ ಈ ಅನುಭವದ ಕತೆ ಈಗ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೌಜನ್ಯ ಪ್ರಕರಣದಲ್ಲಿ ಮರುತನಿಖೆ ಬೇಕಾದ್ರೆ ಕೋರ್ಟ್ ಗೆ ಹೋಗಲಿ: ಸಿಎಂ ಸಿದ್ದರಾಮಯ್ಯ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಸರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ತೂಕ ಇಳಿಕೆಗೆ ಎಷ್ಟು ಸಮಯ ತೆಗೆದುಕೊಳ್ಳಬೇಕು

ರಷ್ಯನ್ ಆಯಿಲ್ ಜೊತೆಗೆ ಒಂದು ಕಟ್ಟು ದರ್ಬೆ, ಜನಿವಾರ ಫ್ರೀ: ಫುಲ್ ಟ್ರೋಲೋ ಟ್ರೋಲ್

ಮುಂದಿನ ಸುದ್ದಿ
Show comments