ಕಲ್ಪೆಟ್ಟಾ: ಕೇರಳದಲ್ಲಿ ನಿನ್ನೆಯಿಂದ ನಿರಂತರ ಮಳೆಯಾಗುತ್ತಿದ್ದು ವಯನಾಡಿನ ಚೂರಲ್ಮಲಾದಲ್ಲಿರುವ ಬೈಲಿ ಸೇತುವೆಯ ರಕ್ಷಣಾತ್ಮಕ ಗೋಡೆಯ ವಿವಿಧ ಭಾಗಗಳಲ್ಲಿ ಬಿರುಕುಗಳು ಕಂಡುಬಂದಿದೆ. ಈ ಹಿನ್ನೆಲೆ ಸೇತುವೆಯ ಮೂಲಕ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಸೇತುವೆಯ ಪಿಲ್ಲರ್ಗಳ ಕೆಳಗಿರುವ ಮಣ್ಣು ಸವೆದು ಹೋಗಿದ್ದು, ಸೇತುವೆಯ ಮೂಲಕ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಈ ಪ್ರದೇಶದ ಚಹಾ ಮತ್ತು ಏಲಕ್ಕಿ ತೋಟಗಳಿಗೆ ಹೋಗುವ ಕಾರ್ಮಿಕರಿಗೆ ಸೇತುವೆಯು ದೈನಂದಿನ ಮಾರ್ಗವಾಗಿದೆ.
ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ.
ಬೈಲಿ ಸೇತುವೆ ಬಳಿ ಜಲಾವೃತಗೊಂಡ ಕಾರಣ, ಕೆಲವು ತೋಟದ ಕಾರ್ಮಿಕರು ತಾತ್ಕಾಲಿಕವಾಗಿ ಸಿಲುಕಿಕೊಂಡಿದ್ದರು ಆದರೆ ನೀರು ಕಡಿಮೆಯಾದ ನಂತರ ಸುರಕ್ಷಿತವಾಗಿ ಮರಳಲು ಸಾಧ್ಯವಾಯಿತು.
ವಯನಾಡಿನಲ್ಲಿ ಗುರುವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂಡಕ್ಕಿಯಲ್ಲಿ ಪ್ರಸ್ತುತ ಯಾವುದೇ ನಿವಾಸಿಗಳಿಲ್ಲದ ಕಾರಣ ತಕ್ಷಣದ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದರು.