Select Your Language

Notifications

webdunia
webdunia
webdunia
webdunia

ತ್ರಿವಳಿ ತಲಾಖ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶದ ಸಚಿವ

swami prasadh maurya
ಲಖನೌ , ಶನಿವಾರ, 29 ಏಪ್ರಿಲ್ 2017 (18:50 IST)
ತ್ರಿವಳಿ ತಲಾಖ್ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತ್ರಿವಳಿ ತಲಾಖ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಮ್ಮ ಕಾಮದ ಹಸಿವು ತೀರಿಸಿಕೊಳ್ಳುವುದಕ್ಕಾಗಿ ಪತ್ನಿಯರನ್ನ ಬದಲಿಸಲು ಮುಸ್ಲಿಮರು ತ್ರಿವಳಿ ತಲಾಖ್ ಬಳಸುತ್ತಿದ್ದಾರೆ ಎಂದು ಸಚಿವ ಸ್ವಾಮಿ ಹೇಳಿದ್ದಾರೆ.
 

ಇದೇವೇಳೆ, ತ್ರಿವಳಿ ತಲಾಖ್`ಗೆ ಯಾವುದೇ ಆಧಾರವಿಲ್ಲ ಎಂದಿರುವ ಸಚಿವ ಮೌರ್ಯ,   ವಿನಾಕಾರಣ ತಲಾಖ್ ನೀಡಲ್ಪಟ್ಟಿರುವ ಮಹಿಳೆಯರ ಪರವಾಗಿ ಬಿಜೆಪಿ ಇದೆ ಎಂದಿದ್ಧಾರೆ.

`ತಲಾಖ್`ಗೆ ಯಾವುದೇ ಆಧಾರವಿಲ್ಲ. ಕೇವಲ ತಮ್ಮ ಕಾಮಕ್ಕಾಗಿ ಬಳಸಿಕೊಂಡು ಪತ್ನಿ ಮತ್ತು ಮಕ್ಕಳನ್ನ ಬೀದಿಗೆ ಬಿಡುತ್ತಿದ್ದಾರೆ. ಅಂತಹ ಸಂತ್ರಸ್ತ ಮಹಿಳೆಯರ ಪರ ಬಿಜೆಪಿ ಇದೆ. ಅವರು ಗೌರವದಿಂದ ಬಾಳಲು ನೆರವು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಸಚಿವ ಮೌರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಇಸ್ಲಾಂ ವೈಯಕ್ತಿಕ ಕಾನೂನು ಮಂಡಳಿಯ ಹಿರಿಯ ಸದಸ್ಯ ಮೌಲಾನಾ ಖಾಲಿದ್ ರಶೀದ್, ಬೇಷರತ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಮೂಲದ ಗೂಗಲ್ ಸಿಇಓ ಸುಂದರ್ ಪಿಚೈ ಸಂಬಳ ಎಷ್ಟು ಗೊತ್ತಾ..?