Select Your Language

Notifications

webdunia
webdunia
webdunia
webdunia

ದೂರು ಕೈ ಬಿಡಲು ನಕಾರ, ರೇಪ್ ಪೀಡಿತೆಯ ಮೇಲೆ ಅ್ಯಸಿಡ್ ಎರಚಿದ ಆರೋಪಿಗಳು

ದೂರು ಕೈ ಬಿಡಲು ನಕಾರ, ರೇಪ್ ಪೀಡಿತೆಯ ಮೇಲೆ ಅ್ಯಸಿಡ್ ಎರಚಿದ ಆರೋಪಿಗಳು
ಬುಲಂದ್‌ಶಹರ್ , ಮಂಗಳವಾರ, 27 ಸೆಪ್ಟಂಬರ್ 2016 (14:59 IST)
ತಮ್ಮ ವಿರುದ್ಧ ಸಲ್ಲಿಸಿದ್ದ ಅತ್ಯಾಚಾರ ದೂರನ್ನು ಹಿಂದಕ್ಕೆ ಪಡೆಯಲು ನಿರಾಕರಿಸಿದಳೆಂಬ ಕಾರಣಕ್ಕೆ ನಾಲ್ವರು ಆರೋಪಿಗಳು 30 ವರ್ಷದ ಯುವತಿಯ ಆ್ಯಸಿಡ್ ದಾಳಿ ನಡೆಸಿ ಮತ್ತಷ್ಟು ಕ್ರೌರ್ಯ ಮೆರೆದ ಹೇಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

 
ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನನ್ನ ಪತಿಯನ್ನು ಮರಕ್ಕೆ ಕಟ್ಟಿ ಹಾಕಿ ತನ್ನ ಮುಖ ಮತ್ತು ಕುತ್ತಿಗೆಯ ಮೇಲೆ ಆ್ಯಸಿಡ್ ಎರಚಲಾಗಿದೆ. ಈ ಹಿಂದೆ ಅವರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಕುರಿತು ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಅಂದಿನಿಂದ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದ ಅವರು ಅದೇ ದ್ವೇಷದಲ್ಲಿ ನನ್ನ ಮೇಲೆ ಆ್ಯಸಿಡ್ ಎರಚಿದ್ದಾರೆ ಎಂದು ಪೀಡಿತೆ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾಳೆ. 
 
ಪೀಡಿತೆಯ ಮುಖ ಮತ್ತು ಕುತ್ತಿಗೆಗೆ ಸುಟ್ಟ ಗಾಯಗಳಾಗಿದ್ದು ಅವಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
 
ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬುಲಂದ್‌ಶಹರ್ ಎಸ್‌ಪಿ ಮಾನ್ ಸಿಂಗ್ ಚೌಹಾನ್ ತಿಳಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ನೀರು ಮತ್ತು ನೆತ್ತರು ಜತೆಗೆ ಹರಿಯದು: ಮೋದಿ