15 ವರ್ಷ ವಯಸ್ಸಿನ ಬಾಲಕಿಯ ಮೇಲೆ ಆಕೆಯ ಶಾಲೆಯ ವ್ಯವಸ್ಥಾಪಕನೇ ಅತ್ಯಾಚಾರವೆಸಗಿದ ದೃಶ್ಯಾವಳಿಗಳು ವಾಟ್ಸಪ್ನಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದಾಂತೆ ಉತ್ತರಪ್ರದೇಶದ ಇಟಾಹ್ದಲ್ಲಿನ ಪಂಚಾಯತ್ ವಿಚಿತ್ರ ಆದೇಶ ಹೊರಡಿಸಿದೆ. ಬಾಲಕಿಗೆ ನ್ಯಾಯ ನೀಡುವ ಬದಲು 18 ವರ್ಷದ ಒಳಗಿನ ಬಾಲಕಿಯರಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸಿದೆ.
ಭಿಲೈಪುರದ ಲೋಧಿ ರಜಪೂತ್ ಸಮುದಾಯದ ಪಂಚಾಯತ್ ಈ ಆದೇಶ ಹೊರಡಿಸಿದ್ದು, ಬಾಲಕಿಯರನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡಲು ಮುನ್ನೆಚ್ಚರಿಕೆಯ ಕ್ರಮವಾಗಿ ಈ ಫರ್ಮಾನು ಎಂದಿದೆ. ಅಲ್ಲದೇ ಬಾಲಕಿಗೆ ಶಾಲೆಯನ್ನು ಬಿಟ್ಟು ಬಿಡುವಂತೆ ಸೂಚನೆ ನೀಡಿದೆ.
ಜೂನ್ 30 ರಂದು ಶ್ರೀ ಕೃಷ್ಣಾ ಹೈಸ್ಕೂಲ್ ವ್ಯವಸ್ಥಾಪಕ ಜಿತೇದ್ರ ಸಿಂಗ್ ಯಾದವ್ ಎಂಬಾತ ತಮ್ಮದೇ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಘಟನೆಯನ್ನು ಚಿತ್ರೀಕರಿಸಿದ್ದ. ಆತ ವಿಡಿಯೋವನ್ನು ಎಮ್ಎಮ್ಎಸ್ ವಿಡಿಯೋ ಮಾಡಿ ಹರಿಯ ಬಿಡಬಹುದೆಂಬ ಭಯದಿಂದ ಬಾಲಕಿ ಯಾರಿಗೂ ಈ ವಿಷಯವನ್ನು ತಿಳಿಸಿರಲಿಲ್ಲ.
ಆದರೆ ವಿಡಿಯೋ ಈಗ ವಾಟ್ಸಪ್ನಲ್ಲಿ ಆಗಿ ಹರಿದಾಡುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.