ದೇಶದಲ್ಲಿಯೇ ಖ್ಯಾತಿ ಪಡೆದ ಆಯುರ್ವೇದಿಕ ಕಂಪೆನಿಯ ನಾಲ್ವರು ಅಧಿಕಾರಿಗಳು ರಿವಾಲ್ವರ್ನಿಂದ ಬೆದರಿಸಿ 25 ವರ್ಷದ ಡಾನ್ಸರ್ ಮೇಲೆ ಗ್ಯಾಂಗ್ರೇಪ್ ಎಸಗಿದ ಹೇಯ ಘಟನೆ ಲಕ್ನೋದಿಂದ 20 ಕಿ.ಮೀ ದೂರದಲ್ಲಿರುವ ಬಂತಾರಾ ಪ್ರದೇಶದಲ್ಲಿ ನಡೆದಿದೆ.
ಲಕ್ನೋ ನಿವಾಸಿ ಆರೋಪಿಗಳಾದ ಸತ್ಯವೀರ್ ಸಿಂಗ್ ದೇವರಾಜ್ ಸಿಂಗ್, ರಾಷ್ಟ್ರೀಯ ಭೂಷಣ್ ಭಾರ್ತಿ ಮತ್ತು ಪರೇಶ್ ತೋಮರ್ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಹೋಟೆಲ್ ಕಾಯ್ದೆಯನ್ನು ಉಲ್ಲಂಘಿಸಿ ನೃತ್ಯ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಿದ್ದಕ್ಕಾಗಿ ಹೋಟೆಲ್ ವ್ಯವಸ್ಥಾಪಕ ಸೌರಭ್ ಸಾಚಾರ್ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಫ್ಐಆರ್ ವರದಿಯ ಪ್ರಕಾರ, ಡಾನ್ಸರ್ ಮಹಿಳೆಯನ್ನು ಸಂಪರ್ಕಿಸಿದ ಆರೋಪಿ ಸತ್ಯವೀರ್ ಸಿಂಗ್, ಕಂಪೆನಿಯ ಕಾರ್ಯಕ್ರಮದಲ್ಲಿ ನೃತ್ಯ ಕಾರ್ಯಕ್ರಮ ನಡೆಸಿಕೊಡುವಂತೆ ಕೋರಿದ್ದಾನೆ. ಮಧ್ಯರಾತ್ರಿವರೆಗೆ ನಡೆದ ಕಾರ್ಯಕ್ರಮದ ನಂತರ ಕುಡಿದ ಮತ್ತಿನಲ್ಲಿದ್ದ ನಾಲ್ವರು ಆರೋಪಿಗಳು, ಹಣ ಪಾವತಿಸುವುದಾಗಿ ಡಾನ್ಸರ್ಳನ್ನು ರೂಮ್ಗೆ ಕರೆದು ಗನ್ ತೋರಿಸಿ ಗ್ಯಾಂಗ್ರೇಪ್ ಎಸಗಿದ್ದಾರೆ.
ಗ್ಯಾಂಗ್ರೇಪ್ಗೊಳಗಾದ ನಂತರ ಯುವತಿ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ