ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೊಸದೊಂದು ವಿವಾದಕ್ಕೆ ಸಿಲುಕಿದ್ದಾರೆ. ದಲಿತ ಕುಟುಂಬಗಳಿಗೆ ತಮ್ಮನ್ನು ಭೇಟಿಯಾಗುವ ಮೊದಲು ಸೋಪು, ಶ್ಯಾಂಪೂ ಕೊಟ್ಟು ಶುಚಿಯಾಗಿರುವಂತೆ ಹೇಳಿದ್ದಾರೆಂಬುದು ಅವರ ಮೇಲಿನ ಆರೋಪ.
ಸಿಎಂ ಜತೆಗಿನ ಸಭೆಗೆ ಮೊದಲು ಮುಸಾಹರ್ ನಗರದ ದಲಿತ ಕುಟುಂಬಗಳಿಗೆ ಶುಚಿಯಾಗಿ ಬರುವಂತೆ ಸೋಪು ಮತ್ತು ಶ್ಯಾಂಪೂ ವಿತರಿಸಲಾಯಿತಂತೆ. ಈ ಬಗ್ಗೆ ಇದೀಗ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
‘ಈ ಘಟನೆಯಿಂದ ಬಿಜೆಪಿ ಮತ್ತು ಆರ್ ಎಸ್ಎಸ್ ನ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿಗಳ ನಿಜ ಬಣ್ಣ ಬಯಲಾಗಿದೆ. ಸಿಎಂ ಯೋಗಿಗೆ ಯೋಗಿ (ಸರ್ವ ಪರಿತ್ಯಾಗಿ) ಬದಲು ಭೋಗಿ (ಸುಖ ಜೀವನ ಆಸಕ್ತ) ಎಂದು ಹೆಸರಿಡಬೇಕಾಗಿತ್ತು’ ಎಂದಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಗ್ವಿ ತಕ್ಷಣವೇ ಸಿಎಂ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ