Select Your Language

Notifications

webdunia
webdunia
webdunia
webdunia

ಬಡತನ: ಸಾಕಲಾಗದೆಂದು ಮಗನನ್ನೇ ಸಾಯಿಸಿದಳು

ಬಡತನ: ಸಾಕಲಾಗದೆಂದು ಮಗನನ್ನೇ ಸಾಯಿಸಿದಳು
ಮುಂಬೈ , ಬುಧವಾರ, 29 ಜೂನ್ 2016 (11:44 IST)
ಬಡತನದಲ್ಲಿ ಬೇಯುತ್ತಿದ್ದ ತಾಯಿಯೋರ್ವಳು ಸಾಕಲಾಗೆಂದು ತನ್ನ ಮಗನನ್ನೇ ಸಾಯಿಸಿದ ಹೃದಯವಿದ್ರಾವಕ ಘಟನೆ ಮುಂಬೈನಲ್ಲಿ ನಡೆದಿದೆ. 

ತನ್ನ ಪತಿಯ ಸಾವಿನ ಬಳಿಕ ಆರ್ಥಿಕ ಸಮಸ್ಯೆಯಿಂದ ಬಲುತ್ತಿದ್ದ 25 ವರ್ಷದ ಸಾವಿತ್ರಿ ದುರ್ನಲೆ ತನ್ನ 6 ವರ್ಷದ ಮಗನ ಕುತ್ತಿಗೆ ಹಿಸುಕಿ ಕೊಲೆಗೈದು ಬಳಿಕ ಶತಾಬ್ದಿ ಆಸ್ಪತ್ರೆಗೆ ಕರೆತಂದು ಮಗನ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ವೈದ್ಯರ ಬಳಿ ನಾಟಕವಾಡಿದ್ದಾಳೆ. ಆದರೆ ಮಗು ಈಗಾಗಲೇ ಸತ್ತಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಜತೆಗೆ ಅದರದು ಅಸಹಜ ಸಾವು ಎಂದು ವರದಿ ನೀಡಿದ್ದಾರೆ.
 
ವೈದ್ಯರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ತಾಯಿಯನ್ನು ಕಠಿಣವಾಗಿ ವಿಚಾರಣೆಗೊಳಪಡಿಸಿದ್ದಾರೆ. ಮೊದಲು ಮೊದಲು ಮಗು ಎರಡು ದಿನಗಳಿಂದ ಅನಾರೋಗ್ಯಕ್ಕೀಡಾಗಿತ್ತು ಎಂದು ಹೇಳಿದ ತಾಯಿ ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. 
 
ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. 


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
 
ಕರ್ನಾಟಕದ ಗುಲಬರ್ಗಾ ಮೂಲದ ಮಹಿಳೆ ಕೂಲಿಕಾರ್ಮಿಕನ ಜತೆ ಮದುವೆಯಾಗಿದ್ದಳು. ಆತ ಕಳೆದ ನಾಲ್ಕು ವರ್ಷದ ಹಿಂದೆ ಸಾವನ್ನಪ್ಪಿದ್ದ. ವಾಸಿಸಲು ಮನೆಯೂ ಇಲ್ಲದ ಅವಳು ಮಗನನ್ನು ಸಾಕಲು ಹೆಣಗಾಡುತ್ತಿದ್ದಳು. ತಿಂಗಳಿಗೆ 4,000 ದುಡಿಯುತ್ತಿದ್ದಳಾದರೂ ಸದಾ ಅನಾರೋಗ್ಯದಿಂದ ಬಳಲುತ್ತಿದ್ದ ಮಗನ ಔಷಧಕ್ಕೆ ಆ ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಮಗನನ್ನು ಸಾಯಿಸಿರುವುದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿದ ಪದಾಧಿಕಾರಿಗಳ ಪಟ್ಟಿ ರದ್ದು!