ಮದ್ಯದ ಅಮಲಿನಲ್ಲಿ ಫೋನ್ ಗಾಗಿ ಕಿತ್ತಾಟ: ಕೊಲೆಯಲ್ಲಿ ಅಂತ್ಯ

Webdunia
ಶುಕ್ರವಾರ, 8 ಜುಲೈ 2022 (11:01 IST)
ನವದೆಹಲಿ: ಮದ್ಯದ ನಶೆಯಲ್ಲಿ ಮನುಷ್ಯ ತಾನೇನು ಮಾಡುತ್ತೇನೆಂಬುದನ್ನು ಮರೆಯುತ್ತಾನೆ. ಇದೀಗ ವ್ಯಕ್ತಿಗಳಿಬ್ಬರು ಮದ್ಯದ ನಶೆಯಲ್ಲಿ ಕಿತ್ತಾಡಿಕೊಂಡಿದ್ದು ಓರ್ವನನ್ನು ಕೊಲೆ ಮಾಡಲಾಗಿದೆ.

ಆರೋಪಿ ಸಣ್ಣದೊಂದು ಬೇಕರಿ ನಡೆಸುತ್ತಿದ್ದ. ಮೃತ ವ್ಯಕ್ತಿ ಈತನ ಅಂಗಡಿಗೆ ಮಾಮೂಲಾಗಿ ಬರುತ್ತಿದ್ದ ಗ್ರಾಹಕನಾಗಿದ್ದ. ಇದೇ ಸ್ನೇಹದಲ್ಲಿ ಇಬ್ಬರೂ ನಾಲ್ಕು ಬಾಟಲಿ ಮದ್ಯ ಖರೀದಿಸಿ ಜೊತೆಗೇ ಕೂತು ಕುಡಿದಿದ್ದಾರೆ.

ಮೂರು ಬಾಟಲಿ ಮದ್ಯ ಖಾಲಿಯಾದ ಬಳಿಕ ವರಾತ ಶುರುವಾಗಿದೆ. ಮೃತ ವ್ಯಕ್ತಿ ಆರೋಪಿಯ ಫೋನ್ ಪಡೆದು ಯಾರಿಗೋ ಮಾತನಾಡಲು ಶುರು ಹಚ್ಚಿಕೊಂಡಿದ್ದಾನೆ. ಆರೋಪಿ ವಾಪಸ್ ಕೇಳಿದಾಗ ಕೊಡದೇ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಕಿತ್ತಾಟವಾಗಿದೆ. ಇದೇ ಸಿಟ್ಟಿನಲ್ಲಿ ಆರೋಪಿ ತಲೆಗೆ ಹೊಡೆದಿದ್ದಾನೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಬಳಿಕ ಏನೂ ನಡೆದೇ ಇಲ್ಲವೆಂಬಂತೆ ಅಲ್ಲಿಂದ ಪರಾರಿಯಾಗಿದ್ದಾನೆ.

ಆದರೆ ಅನಾಥವಾಗಿ ಬಿದ್ದಿದ್ದ ಶವ ನೋಡಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳೀಯ ಸಿಸಿಟಿವಿ ಫೂಟೇಜ್ ಗಳನ್ನು ಗಮನಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಲ್ಲದೆ, ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೀನ್ಸ್ ಪಾರ್ಕ್ ಎಲ್ಲಪ್ಪ: ರಾಹುಲ್ ಗಾಂಧಿಗೆ ಪ್ರಶ್ನಿಸಿದ ಆರ್ ಅಶೋಕ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ನಿತೀಶ್ ಕುಮಾರ್ ಇಂದು 10 ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ: ಯಾರೆಲ್ಲಾ ಭಾಗಿಯಾಗಲಿದ್ದಾರೆ

ಬಿಜೆಪಿ, RSS ದಲಿತರು ಯಾಕೆ ಸೇರ್ತಾರೋ ಸಿದ್ದರಾಮಯ್ಯ: ಜಾತಿ ಮಾತನಾಡುವುದನ್ನು ನಿಲ್ಲಿಸಿ ಎಂದ ನೆಟ್ಟಿಗರು

ಬೆಂಗಳೂರು 7 ಕೋಟಿ ರೂ ದರೋಡೆಗೆ ವೆಬ್ ಸೀರೀಸ್ ಸ್ಪೂರ್ತಿ: ಶಾಕಿಂಗ್ ವಿಚಾರಗಳು ಬಹಿರಂಗ

ಮುಂದಿನ ಸುದ್ದಿ
Show comments