Select Your Language

Notifications

webdunia
webdunia
webdunia
webdunia

ನಾಲಿಗೆ, ಮರ್ಮಾಂಗ ಕಚಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್

ನಾಲಿಗೆ, ಮರ್ಮಾಂಗ ಕಚಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಬೆಂಗಳೂರು , ಭಾನುವಾರ, 19 ಮಾರ್ಚ್ 2017 (13:21 IST)
ನಾಲಿಗೆ, ಮರ್ಮಾಂಗಕ್ಕೆ ಕತ್ತರಿ ಹಾಕಲಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ನಾಲಿಗೆ ಮತ್ತು ಮರ್ಮಾಂಗವನ್ನು ಯಾರೋ ಕತ್ತರಿಸಿದ್ದಲ್ಲ, ನಾನೇ ಕಟ್ ಮಾಡಿಕೊಂಡಿದ್ದು ಎಂದು ಬಿಜು ನಾಯಕ್ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
 
 ಮಧ್ಯರಾತ್ರಿಯಲ್ಲಿ ಕಾಳಿದೇವಿಯನ್ನು ಆರಾಧಿಸಿದಲ್ಲಿ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದರಿಂದ ಕಾಳಿ ಮಾತೆಯ ಅನುಗ್ರಹ ಪಡೆಯಲು ನಾನೇ ನನ್ನ ಮರ್ಮಾಂಗ ಮತ್ತು ನಾಲಿಗೆಯನ್ನು ಕತ್ತರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾನೆ. 
 
ದುಷ್ಕರ್ಮಿಗಳು ಮರ್ಮಾಂಗ ಮತ್ತು ನಾಲಿಗೆಗೆ ಕತ್ತರಿ ಹಾಕಿದ್ದಾರೆ ಎಂದು ಬಿಜು ನಾಯಕ್ ಪೊಲೀಸರಿಗೆ ಮಾಹಿತಿ ನೀಡಿದ್ದನು.
 
ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಬಿಜುನಾಯಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರದಲ್ಲಿ ಚೇತರಿಕೆಯಾಗುವ ಲಕ್ಷಣಗಳಿವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಗಾಗಿ ಮತದಾರರ ಪಡಿತರ ಚೀಟಿ ಪಡೆದು ಹಣ ಹಂಚಿಕೆ: ಬಿಎಸ್‌ವೈ