Select Your Language

Notifications

webdunia
webdunia
webdunia
webdunia

ಇಂದು ದೆಹಲಿ ಪೊಲೀಸರಿಂದ ಟಿಟಿ ದಿನಕರನ್ ವಿಚಾರಣೆ

ಇಂದು ದೆಹಲಿ ಪೊಲೀಸರಿಂದ ಟಿಟಿ ದಿನಕರನ್ ವಿಚಾರಣೆ
NewDelhi , ಶನಿವಾರ, 22 ಏಪ್ರಿಲ್ 2017 (10:47 IST)
ನವದೆಹಲಿ: ಚುನಾವಣಾ ಚಿಹ್ನೆಗಾಗಿ ಲಂಚ ನೀಡಿದ ಆರೋಪದಲ್ಲಿ ಎಐಎಡಿಎಂಕೆ (ಅಮ್ಮ) ಬಣದ ಉಪ ಕಾರ್ಯದರ್ಶಿ ಟಿಟಿ ದಿನಕರನ್ ಇಂದು ವಿಚಾರಣೆಗಾಗಿ ದೆಹಲಿ ಪೊಲೀಸರೆದುರು ಹಾಜರಾಗಲಿದ್ದಾರೆ.

 
ಬುಧವಾರ ರಾತ್ರಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ದಿನಕರನ್ ಗೆ ನೋಟೀಸ್ ಜಾರಿ ಮಾಡಿದ್ದರು. ಅದರಂತೆ ನಿನ್ನೆ ದೆಹಲಿಗೆ ವಿಮಾನದಲ್ಲಿ ತೆರಳಿದ ದಿನಕರನ್ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು.

ಸುಮಾರು 50 ಕೋಟಿ ರೂ. ಲಂಚದ ಆಮಿಷ ಒಡ್ಡಿದ ಆರೋಪ ದಿನಕರನ್ ಮೇಲಿದೆ. ಈ ಸಂಬಂಧ ಓರ್ವನನ್ನು ಬಂಧಿಸಿ ವಿಚಾರಣೆ ನಡೆಸುವಾಗ ಆತ ದಿನಕರನ್ ಹೆಸರು ಪ್ರಸ್ತಾಪಿಸದ್ದ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬಾಬ್ರಿ ಮಸೀದಿ ಒಡೆಯಲು ಪ್ರೇರೇಪಿಸಿದ್ದು ಅಡ್ವಾಣಿಯಲ್ಲ ನಾನು ಎಂದ ಇವರಾರು?!