Select Your Language

Notifications

webdunia
webdunia
webdunia
webdunia

ಇಂದು ರಾತ್ರಿಯೇ ಎಐಎಡಿಎಂಕೆ ಎರಡೂ ಬಣಗಳ ವಿಲೀನ ಸಾಧ್ಯತೆ

ಇಂದು ರಾತ್ರಿಯೇ ಎಐಎಡಿಎಂಕೆ ಎರಡೂ ಬಣಗಳ ವಿಲೀನ ಸಾಧ್ಯತೆ
ಚೆನ್ನೈ , ಶುಕ್ರವಾರ, 18 ಆಗಸ್ಟ್ 2017 (18:12 IST)
ಇಂದು ರಾತ್ರಿಯೇ ಎಐಎಡಿಎಂಕೆ ಎರಡೂ ಬಣಗಳು ವಿಲೀನವಾಗುವ ಸಾಧ್ಯತೆಗಳಿವೆ ಎಂದು ಎಐಎಡಿಎಂಕೆ ಉನ್ನತ ಮೂಲಗಳು ತಿಳಿಸಿವೆ.
ಇಂದು ರಾತ್ರಿ 8 ಗಂಟೆಗೆ ಎರಡೂ ಬಣಗಳ ವಿಲೀನ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
 
ಚೆನ್ನೈನ ಮರೀನಾ ಬೀಚ್‌ ಬಳಿಯಿರುವ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಸಮಾಧಿಯ ಎದುರುಗಡೆ ಉಭಯ ಬಣಗಳು ವಿಲೀನ ಘೋಷಿಸಲಿವೆ  
 
ದಿವಂಗತ ಮಾಜಿ ಸಿಎಂ ಜಯಲಲಿತಾ ಅವರ ಸಮಾಧಿಯನ್ನು ಸ್ವಚ್ಚಗೊಳಿಸುವಂತೆ ಸರಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಸಮಾದಿಯನ್ನು ಹೂವುಗಳಿಂದ ಅಲಂಕೃತಗೊಳಿಸಲಾಗಿದೆ. 
 
ಜಯಾ ಸಮಾಧಿಗೆ ಶೃದ್ದಾಂಜಲಿ ಸಲ್ಲಿಸಿದ ನಂತರ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಮಾಜಿ ಸಿಎಂ ಪನ್ನೀರ್ ಸೆಲ್ವಂ ವಿಲೀನ ಘೋಷಿಸಲಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆರ್`ಬಿಐನ 50 ರೂ. ಹೊಸ ನೋಟಿನ ಫೋಟೋ ಲೀಕ್