Select Your Language

Notifications

webdunia
webdunia
webdunia
webdunia

ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ: ಅಶೋಕ್ ಚೌಧರಿ

ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ: ಅಶೋಕ್ ಚೌಧರಿ
ನವದೆಹಲಿ , ಶನಿವಾರ, 8 ಜುಲೈ 2017 (16:17 IST)
ನರೇಂದ್ರ ಮೋದಿ ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ್ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಪುಟದಲ್ಲಿ ಸಚಿವರಾಗಿರುವ ಚೌಧರಿ, ಗುಜರಾತ್‌ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಗಡಿಪಾರು ಮಾಡಲಾಗಿತ್ತು. ಮತ್ತೊಂದೆಡೆ ಸಾವಿರಾರು ಜನರ ಪ್ರಾಣ ತೆಗೆದವರು ಪ್ರದಾನಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕುಮ್ಮಕ್ಕಿನಿಂದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕುಟುಂಬದವರ ಮನೆಯ ಮೇಲೆ ಸಿಬಿಐ ದಾಳಿಗಳನ್ನು ನಡೆಸುತ್ತಿದೆ. ಕಿರುಕುಳ ನೀಡುವ ಉದ್ದೇಶದಿಂದ ಪದೇ ಪದೇ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
 
ಕೇಂದ್ರ ಸರಕಾರ ಸೇಡಿನ ರಾಜಕೀಯದ ಉದ್ದೇಶದಿಂದಾಗಿ ಲಾಲು ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಇಲಾಖೆಗಳನ್ನು ಬಳಸಿಕೊಳ್ಳುತ್ತಿದೆ.
 
ಮತ್ತೊಂದೆಡೆ ಲಾಲು ಪುತ್ರಿ ಮೀಸಾ ಭಾರತಿ ನಿವಾಸಗಳ ಮೇಲೆ ಕೂಡಾ ಸಿಬಿಐ ದಾಳಿ ನಡೆಸಿರುವುದು ಲಾಲು ಯಾದವ್ ಮತ್ತು ಕಾಂಗ್ರೆಸ್ ವಲಯಗಳಲ್ಲಿ ತಳಮಳಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಸರಣಿ ಸ್ಫೋಟದ ಪ್ರಮುಖ ಖಾದಿರ್ ಅಹ್ಮದ್ ಬಂಧನ