Select Your Language

Notifications

webdunia
webdunia
webdunia
webdunia

ಈ ಬಾರಿಯೂ ಕಪ್ ನಮ್ದೇ: ಯೋಗಿ !

ಈ ಬಾರಿಯೂ ಕಪ್ ನಮ್ದೇ: ಯೋಗಿ !
ಲಖನೌ , ಭಾನುವಾರ, 9 ಜನವರಿ 2022 (13:10 IST)
ಲಖನೌ : ಈ ಬಾರಿಯೂ ಭರ್ಜರಿ ಬಹುಮತ ಪಡೆದು ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಯ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಉತ್ತರ ಪ್ರದೇಶ ಸಹಿತ ಐದು ರಾಜ್ಯಗಳ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರಿಂದ ಇಂಥ ವಿಶ್ವಾಸದ ಮಾತುಗಳು ಬಂದಿದೆ.

ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಉತ್ತರ ಪ್ರದೇಶ ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಹೊಸ ಭಾರತದ ನವ ಉತ್ತರ ಪ್ರದೇಶದಲ್ಲಿ ಘೋಷಣೆಯಾಗಿರುವ ಗಣತಂತ್ರದ ಹಬ್ಬವನ್ನು ನಾವು ಸ್ವಾಗತ ಮಾಡುತ್ತೇವೆ.

ಮಾರ್ಚ್ 10 ರಂದು ಘೋಷಣೆಯಾಗಿಲಿರುವ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶದಲ್ಲಿ ನಮಗೆ ಭರ್ಜರಿ ಬಹುಮತ ಸಿಗಲಿದ್ದು, ಮತ್ತೆ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಮಾಡುತ್ತೇವೆ' ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ಅಧಿವೇಶನಕ್ಕೆ ತೊಡಕು?