Webdunia - Bharat's app for daily news and videos

Install App

ದಕ್ಷಿಣ ಏಷ್ಯಾದ ಅತೀ ಚಿಕ್ಕ ಮಗು ಈ ಮಾನುಷಿ...!!!

ಗುರುಮೂರ್ತಿ
ಗುರುವಾರ, 25 ಜನವರಿ 2018 (16:41 IST)
ಉದಯಪುರ ಮೂಲದ ದಂಪತಿಗಳಿಗೆ ಜನಿಸಿದ ಮಗು ಇದಾಗಿದ್ದು ಮಾನುಷಿ ಎಂದು ಹೆಸರಿಡಲಾಗಿದೆ, ಈ ಮಗು ಹುಟ್ಟಿದ ಸಂದರ್ಭದಲ್ಲಿ 400 ಗ್ರಾಂ ತೂಕ ಹೊಂದಿದ್ದು 6 ತಿಂಗಳಿಗೆ ಜನಿಸಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ಹುಟ್ಟಿದ ಮಕ್ಕಳು 2 ರಿಂದ 3 ಕೇಜಿ ತೂಕವಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ ಆದರೆ ಈ ಮಗು ಅದಕ್ಕೆ ಭಿನ್ನವೆಂದೇ ಹೇಳಬಹುದು.
ಭಾರತ ಮತ್ತು ದಕ್ಷಿಣ ಏಷ್ಯಾಗೆ ಹೋಲಿಸಿದರೆ ಬದುಕಿರುವ ಅತೀ ಚಿಕ್ಕ ಮಕ್ಕಳಲ್ಲಿ ಇದೇ ಮೊದಲ ಮಗುವಾಗಿದ್ದು ಇದೀಗ ಈ ಮಗು ಆರೋಗ್ಯಯುತವಾಗಿದೆ. ಗರ್ಭಾವಸ್ಥೆಯಲ್ಲಿರುವ ಸಂದರ್ಭದಲ್ಲಿ ಮಾನುಷಿ ತಾಯಿಗೆ ಅಧಿಕ ರಕ್ತದೊತ್ತಡದ ತೊಂದರೆ ಆಗಿದ್ದು ಇದರಿಂದ ಭ್ರೂಣಕ್ಕೆ ರಕ್ತ ಸಂಪರ್ಕವು ನಿಂತ ಕಾರಣ ಸಿ- ಸೆಕ್ಷನ್ ಮಾಡುವ ಮೂಲಕ ಮಗುವನ್ನು 6 ತಿಂಗಳಿಗೆ ಹೊರತೆಗೆಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
 
ಈ ಮಗು ಹುಟ್ಟಿದ ಸಮಯದಲ್ಲಿ 8.6 ಇಂಚುಗಳಷ್ಟು ಉದ್ದವಿದ್ದು, ಮಾನುಷಿಯ ಪಾದ ಅವಳ ತಂದೆಯ ಹೆಬ್ಬೆರಳಿನಷ್ಟು ದಪ್ಪವಿತ್ತು ಎಂದು ಅವಳ ಪಾಲನೆ ಮಾಡುತ್ತಿದ್ದ ನರ್ಸ್ ತಿಳಿಸಿದ್ದಾರೆ. ಹುಟ್ಟಿದಾಗ ಹೃದಯ, ಕಿಡ್ನಿ, ಮೆದುಳು ಹಾಗೂ ದೇಹದ ಇತರ ಭಾಗವು ಬೆಳವಣಿಗೆಯ ಹಂತದಲ್ಲಿತ್ತು. ಅವಳು ಯಾವುದೇ ಆಹಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ ಆದ ಕಾರಣ ಅವಳನ್ನು ಆಸ್ಪತ್ರೆಯಲ್ಲೇ ನಿಗಾ ಘಟಕದಲ್ಲಿ ಅವಳನ್ನು ಸುಮಾರು 6 ತಿಂಗಳುಗಳ ಕಾಲ ಇಟ್ಟುಕೊಂಡಿದ್ದು ಇತ್ತೀಚಿಗೆ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
 
ಇತ್ತೀಚಿಗೆ ಆಸ್ಪತ್ರೆಯಿಂದ ಹೊರ ಬಂದಿರುವ ಮಗುವಿನ ತೂಕ ಸುಮಾರು 2,400 ಗ್ರಾಂ ಇದ್ದು ದೇಹದ ಎಲ್ಲಾ ಭಾಗಗಳು ಸರಿಯಾಗಿ ಬೆಳವಣಿಗೆ ಹೊಂದಿದೆ. ಆರೋಗ್ಯವು ಉತ್ತಮವಾಗಿದ್ದು ಈಗ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಮಗು ಹೊಂದಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments