Select Your Language

Notifications

webdunia
webdunia
webdunia
webdunia

ಇದು ವೈಯಕ್ತಿಕ ಯುದ್ಧವಲ್ಲ, ಗೆಲುವು ಖಚಿತ: ಅಹ್ಮದ್ ಪಟೇಲ್

ಇದು ವೈಯಕ್ತಿಕ ಯುದ್ಧವಲ್ಲ, ಗೆಲುವು ಖಚಿತ: ಅಹ್ಮದ್ ಪಟೇಲ್
ಅಹಮದಾಬಾದ್ , ಸೋಮವಾರ, 7 ಆಗಸ್ಟ್ 2017 (18:20 IST)
ರಾಜ್ಯಸಭೆ ಚುನಾವಣೆ ವೈಯಕ್ತಿಕ ಯುದ್ಧವಲ್ಲ. ಚುನಾವಣೆಯಲ್ಲಿ ನನ್ನ ಗೆಲುವು ಖಚಿತವಾಗಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಸಲಹೆಗಾರ, ರಾಜ್ಯಸಭೆ ಅಭ್ಯರ್ಥಿ ಅಹ್ಮದ್ ಪಟೇಲ್ ಹೇಳಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿದ್ದು ಎಲ್ಲಾ ಕಾಂಗ್ರೆಸ್ ಶಾಸಕರು ನನ್ನ ಪರವಾಗಿ ಮತಚಲಾಯಿಸುವ ವಿಶ್ವಾಸವಿದೆ ಎಂದರು. 
 
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಮಾತನಾಡೋಲ್ಲ ಎಂದು ಸ್ಪಷ್ಟಪಡಿಸಿದರು.
 
ನನ್ನ ವಿರುದ್ಧ ಎಫ್‌‍ಐಆರ್ ದಾಖಲಾಗಿದೆ ಎನ್ನುವ ವರದಿಗಳಲ್ಲಿ ಸತ್ಯಾಂಶವಿಲ್ಲ. ನನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಎಲ್ಲಾ ಕಾಂಗ್ರೆಸ್ ಶಾಸಕರು ನಮ್ಮ ಜೊತೆಗಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಗುಜರಾತ್ ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಅಹ್ಮದ್ ಪಟೇಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕ ರಾಯಭಾರಿ ಕಚೇರಿಯ ಕೌನ್ಸುಲ್‌ರಾಗಿ ರಾಬರ್ಟ್ ಬುರ್ಗೆಸ್ ಅಧಿಕಾರ ಸ್ವೀಕಾರ