ದೇಶಾದ್ಯಂತ ಗುರುವಾರ ಸಂಭ್ರಮ ಸಡಗರದಿಂದ ರಕ್ಷಾಬಂಧನವನ್ನು ಆಚರಿಸಲಾಯಿತು. ಸದಾ ತಮ್ಮ ವಿಭಿನ್ನತೆಯಿಂದಲೇ ಸುದ್ದಿಯಾಗುನ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಹೋದರ- ಸಹೋದರಿ ಪ್ರೀತಿಯ ಈ ಹಬ್ಬವನ್ನು ಸಹ ವಿಶೇಷವಾಗಿ ಆಚರಿಸಿದರು.
ತಮ್ಮ ನಿವಾಸದ ಮುಂದಿರುವ ಆಲದ ಮರಕ್ಕೆ ಪೂಜೆ ಮಾಡಿ ರಾಖಿ ಕಟ್ಟುವ ಮೂಲಕ ನಿನ್ನೆ ಲಾಲು ಗಮನ ಸೆಳೆದರು.
ಇತರ ಗಣ್ಯರು ಸಹ ರಾಖಿಯನ್ನು ಕಟ್ಟಿಕೊಂಡು ಸಂಭ್ರಮಿಸಿದರು. ಪ್ರಧಾನಿ ಮೋದಿ ಶಾಲಾ ವಿದ್ಯಾರ್ಥಿಗಳಿಂದ ರಾಖಿ ಕಟ್ಟಿಸಿಕೊಂಡರು. ವೃಂದಾವನ ಮತ್ತು ವಾರಣಾಸಿಯ ವಿಧವೆಯರು ಅರಿಗೆ 1001 ರಾಖಿಯನ್ನು ಕಳುಹಿಸಿದ್ದರು. ಗೃಹ ಸಚಿವ ರಾಜನಾಥ್ ಸಿಂಗ್ ಸಹ ವಿದ್ಯಾರ್ಥಿನಿಯರಿಂದ ರಾಖಿ ಕಟ್ಟಿಸಿಕೊಂಡರೆ, ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ದೇಶಧ ಅತ್ಯುನ್ನತ ಯುದ್ಧ ಕ್ಷೇತ್ರ ಸಿಯಾಚಿನ್ಗೆ ತೆರಳಿ ಯೋಧರಿಗೆ ರಾಖಿ ಕಟ್ಟಿ ಸಿಹಿ ಕೊಟ್ಟು ಸಂಭ್ರಮಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ