Webdunia - Bharat's app for daily news and videos

Install App

ಬಯಲಾಯ್ತು ಶಿಕ್ಷಕಿಯ ಕೊಲೆ ರಹಸ್ಯ

Webdunia
ಶನಿವಾರ, 3 ನವೆಂಬರ್ 2018 (14:50 IST)
ನವದೆಹಲಿ : ದೆಹಲಿಯ ವಬಾನಾ ಪ್ರದೇಶದಲ್ಲಿ ನಡೆದಿದ್ದ ಶಿಕ್ಷಕಿಯೊಬ್ಬರ ಕೊಲೆಯ ರಹಸ್ಯವನ್ನು ಕಂಡುಹಿಡಿಯುವಲ್ಲಿ ಇದೀಗ ಪೊಲೀಸರು ಯಶಸ್ವಿಯಾಗಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಪತಿ ಮಂಜೀತ್ (38), ಆತನ ಪಾಟ್ನರ್ ಏಂಜೆಲ್ ಗುಪ್ತಾ ಮತ್ತು ಏಂಜೆಲ್ ಗುಪ್ತಾಳ ತಂದೆ ರಾಜೀವ್ ಬಂಧಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಏಂಜೆಲ್ ಗುಪ್ತಾ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾಳೆ ಎಂದು ತಿಳಿದು ಬಂದಿದೆ.


ಹರಿಯಾಣದ ಸೋನೆಪಟ್ ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ 38 ವರ್ಷದ ಸುನೀತಾ ಎಂಬುವವರು ಬವಾನಾದಲ್ಲಿ ತನ್ನ ಸ್ಕೂಟರ್ ಪಕ್ಕದಲ್ಲಿ ಗುಂಡಿನ ಪೆಟ್ಟು ತಿಂದು ಸಾವನಪ್ಪಿದ್ದರು. ಇವರ ಕೊಲೆಯ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರಿಗೆ ಶಿಕ್ಷಕಿ ಸುನಿತಾ  ಡೈರಿಯಲ್ಲಿ ಏಂಜಲ್ ಗುಪ್ತಾ ಬಗ್ಗೆ ಮಾಹಿತಿಯಿತ್ತು. ಈ ಬಗ್ಗೆ ಏಂಜಲ್ ಗುಪ್ತಾಳನ್ನು ವಶಕ್ಕೆ ಪಡೆದ ಪೊಲೀಸರು ಕಾಲ್ ಹಿಸ್ಟರಿ ಪರಿಶೀಲಿಸಿದ್ದಾರೆ.


ಈ ವೇಳೆ ಸುನಿತಾ ಪತಿ  ಮಂಜೀತ್ ಹಾಗೂ ಏಂಜಲ್ ನಡುವೆ ಸಂಬಂಧವಿದ್ದು, ಈ ಬಗ್ಗೆ ಪತ್ನಿ ಸುನೀತಾಳ ವಿರೋಧವಿದ್ದ ಕಾರಣ ಕಾಂಟ್ರ್ಯಾಕ್ಟ್ ಕೊಲೆಗಾರರನ್ನು ನೇಮಕ ಮಾಡಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಸುನಿತಾ ಕೊಲೆಗೆ ಗುಪ್ತಾಳ ತಂದೆಯೂ ಕೂಡ ಸಾಥ್ ನೀಡಿದ್ದು, ಸದ್ಯಕ್ಕೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments