ವೆಬ್ ಸಿರೀಸ್ ನೋಡಿ ದಂಪತಿ ಕೊಲೆಗೈದು ದರೋಡೆ ಮಾಡಿದ್ದ !

Webdunia
ಭಾನುವಾರ, 13 ಆಗಸ್ಟ್ 2023 (10:56 IST)
ಲಕ್ನೋ : ದಂಪತಿಯನ್ನು ಕೊಲೆಗೈದು ಚಿನ್ನಾಭರಣ ಹಾಗೂ ಹಣ ದೋಚಿದ್ದ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಓರ್ವ ಆರೋಪಿ ಅಂತಿಮ ವರ್ಷದ ಎಲ್ಎಲ್ಬಿ ಪದವಿ ವ್ಯಾಸಾಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 
ಬಂಧಿತರನ್ನು ಪ್ರಿಯಾಂಕ್ ಶರ್ಮಾ (25) ಅಲಿಯಾಸ್ ಪರುಷ್ ಮತ್ತು ಆತನ ಸ್ನೇಹಿತ ಯಶ್ ಶರ್ಮಾ ಅಲಿಯಾಸ್ ಯಶು (24) ಎಂದು ಗುರುತಿಸಲಾಗಿದೆ. ಯಶು ಶರ್ಮಾ 8 ನೇ ತರಗತಿಯವರೆಗೆ ಓದಿದ್ದು, ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೊಲೆ ಸಂಚು ರೂಪಿಸಲು 2020 ರಲ್ಲಿ ಬಿಡುಗಡೆಯಾದ `ಅಸುರ್’ ವೆಬ್ ಸಿರೀಸ್ನಿಂದ ಪ್ರೇರಣೆ ಹೊಂದಿರುವುದಾಗಿ ತನಿಖೆ ವೇಳೆ ಆರೋಪಿಗಳು ಹೇಳಿದ್ದಾರೆ. 

ವಿಚಾರಣೆಯ ವೇಳೆ ಪ್ರಿಯಾಂಕ್ ವೆಬ್ ಸರಣಿಯಿಂದ ಪೊಲೀಸರಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿದ್ದಾಗಿ ಹೇಳಿಕೊಂಡಿದ್ದಾನೆ. ಗುರುತನ್ನು ಮರೆಮಾಚಲು ಕೈಗವಸುಗಳು, ಮುಖವಾಡಗಳು ಮತ್ತು ಹೆಲ್ಮೆಟ್ಗಳನ್ನು ಬಳಸಿದ್ದಾರೆ. ಅಪರಾಧ ಮಾಡಿದ ನಂತರ ಬೈಕ್ನ ನಂಬರ್ ಪ್ಲೇಟ್ ಬದಲಾಯಿಸಿದ್ದಾರೆ. ಅಲ್ಲದೇ ದರೋಡೆಗೆ ಬರಲು ಸಿಸಿ ಕ್ಯಾಮೆರಾಗಳಿಲ್ಲದ ಮಾರ್ಗಗಳನ್ನು ಹುಡುಕಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳು ಗುರುವಾರ ಬ್ರಹ್ಮಪುರಿ ಪ್ರದೇಶದ ನಿವಾಸಿ ಧನ್ ಕುಮಾರ್ ಜೈನ್ (70) ಅವರ ಪತ್ನಿ ಅಂಜು ಜೈನ್ (65) ಅವರ ಮನೆಗೆ ನುಗ್ಗಿ ಇಬ್ಬರ ಮೇಲೂ ದಾಳಿ ಮಾಡಿ ಲೂಟಿ ಮಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಿನ್ನವಿಲ್ಲ, ವಜ್ರವಿಲ್ಲ: ಕೇರಳದ ವಧುವೊಬ್ಬಳು ಚಿನ್ನಾಭರಣವಿಲ್ಲದ ಲುಕ್‌ ದೇಶದೆಲ್ಲೆಡೆ ಸದ್ದು

ಮಾಸ್ಕ್ ಹಾಕಿಕೊಂಡು ಬಿಎಂಟಿಸಿ ಏರಿದ ಸಚಿವ ಬೈರತಿ ಸುರೇಶ್: ಚಿಲ್ರೆ ಇಲ್ಲ ಎಂದರೆ ಸಚಿವರನ್ನೇ ಬಸ್ ನಿಂದ ಕೆಳಿಗಿಳಿಸೋದಾ Video

Video: ಹೀಗಾದ್ರೆ ಡೆಲಿವರಿ ಬಾಯ್ಸ್‌ಗೆ ಡೋರ್ ಓಪನ್ ಮಾಡುವುದು ಹೇಗೆ, ತನಗಾದ ಕೆಟ್ಟ ಅನುಭವ ಬಿಚ್ಚಿಟ್ಟ ಯುವತಿ

Karnataka Weather: ನಿರಂತರ ಮಳೆಯಾಗಿರುವ ಕರಾವಳಿ ಭಾಗದಲ್ಲಿ ಇಂದು ಹೇಗಿರಲಿದೆ ಗೊತ್ತಾ ಹವಾಮಾನ

ಎಸ್‌ ಜಾನಕಿ ಪ್ರತಿ ಮಲಯಾಳಿ ಮನೆಯ ಸದಸ್ಯರಾಗಿದ್ದಾರೆ: ಕೇರಳ ಸಿಎಂ ವಿಡಿ ಸತೀಶನ್‌

ಮುಂದಿನ ಸುದ್ದಿ
Show comments