Webdunia - Bharat's app for daily news and videos

Install App

ವರದಕ್ಷಿಣೆ ಕೇಳಿದ ವರನೊಂದಿಗೆ ಮದುವೆ ನಿರಾಕರಿಸಿದ ವಧು

Webdunia
ಭಾನುವಾರ, 17 ಡಿಸೆಂಬರ್ 2017 (14:55 IST)
ವರದಕ್ಷಿಣೆಗಾಗಿ ಬೇಡಿಕೆಯಿಟ್ಟದ್ದ ವರನೊಂದಿಗೆ ಮದುವೆಯನ್ನು ನಿರಾಕರಿಸಿರುವ ಘಟನೆ ಛತ್ತೀಸಗಢದ ಮುರಾದಾಬಾದ್‌ನಲ್ಲಿ ಜರುಗಿದೆ.

ಜ್ಯೋತಿ ಎಂಬ ವಧು ಬೆಂಗಳೂರಿನ ಮೂಲದ ವರ ಆಶೀಶ್‌ನೊಂದಿಗೆ ಮದುವೆಯನ್ನು ನಿರಾಕರಿಸಿದ್ದು, ಈ ಕುರಿತು ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದಾಳೆ.

ಜ್ಯೋತಿ ಮದುವೆ ಮಾಡಲು ಪೋಷಕರು ವೆಬ್‌ಸೈಟ್‌ನಲ್ಲಿ ಮಗಳ ವಿವರವನ್ನು ದಾಖಲಿಸಿದ್ದರು. ಈ ವಿವರಗಳಿಂದ ಸಂಬಂಧ ಕೂಡಿಕೊಂಡು ಡಿಸೆಂಬರ್ 14ರಂದು ಮದುವೆಗೆ ನಿರ್ಣಯಿಸಲಾಗಿತ್ತು. ಆದರೆ, ಮದುವೆಯ ಮುನ್ನ ನಡೆದ ಆರತಕ್ಷತೆ ಸಮಯದಲ್ಲಿ 15ಲಕ್ಷ ಹಾಗೂ ಕಾರಿಗೆ ಬೇಡಿಕೆಯಿಡಲಾಗಿದೆ. ಈ ಸಂದರ್ಭದಲ್ಲಿ ವರನೊಂದಿಗೆ ಮಾತನಾಡಿ ವಧು ಮದುವೆಯಾದ ನಂತರ ದುಡಿದರೆ ಹಣ ಸಂಪಾದನೆ ಮಾಡಿದರಾಯಿತು ಎಂದು ತಿಳಿಹೇಳಿಲು ಪ್ರಯತ್ನ ಕೂಡ ನಡೆಸಿದ್ದಾಳೆ.

ವರನ ಪೋಷಕರು ಮಾತ್ರ ಹಣ ನೀಡಿದರೆ ಮಾತ್ರ ಮದುವೆ ನಡೆಯುತ್ತದೆ ಎಂದು ಹೇಳಿದ್ದಾರೆ. ಇದರಿಂದ ತಂದೆಗೆ ಅವಮಾನ ಆಗುವುದನ್ನು ಸಹಿಸಲಾಗದೆ ವಧು ಮದುವೆಯನ್ನು ನಿರಾಕರಿಸಿ ವರ ಹಾಗೂ ಕುಟುಂಬದವರನ್ನು ಮದುವೆ ಮಂಟಪದಿಂದ ಹೊರ ನಡೆಯಲು ಸೂಚಿಸಿದ್ದಾಳೆ. ವಧುವಿನ ಕಾರ್ಯಕ್ಕೆ ಕುಟುಂಬದವರಿಂದ ಬೆಂಬಲ ವ್ಯಕ್ತವಾಗಿದ್ದು, ವಧುವಿನ ಹೇಳಿಕೆ ಪಡೆದಿರುವ ಪೊಲೀಸರು ವರದಕ್ಷೆಣೆ ಪ್ರಕರಣ ದಾಖಲು ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ ಸರ್ಕಾರಕ್ಕೆ ದಿವಾಳಿ ಮಾಡೆಲ್ ಆಫ್ ಕರ್ನಾಟಕ ಬಿರುದು ನೀಡಿ ಬಿಜೆಪಿ ವ್ಯಂಗ್ಯ

ಬಲೂಚಿಸ್ತಾನ್ ಶಾಲಾ ಬಸ್ ಸ್ಫೋಟದಲ್ಲಿ ನಾಲ್ವರು ಸಾವು: ಪಾಕ್‌ ಆರೋಪಕ್ಕೆ ಭಾರತದ ಪ್ರತ್ಯುತ್ತರ

ರಾಜ್ಯ ಡಿಜಿಪಿ ಅಲೋಕ್ ಮೋಹನ್ ನಿವೃತ್ತಿ: ಕನ್ನಡಿಗ ಎಂ.ಎ. ಸಲೀಂಗೆ ಒಲಿದ ಮಹತ್ವದ ಹುದ್ದೆ

ಯುವತಿಯ ಶವ ಸೂಟ್‌ಕೇಸ್‌ನಲ್ಲಿ ತುಂಬಿ ರೈಲಿನಿಂದ ಎಸೆದ ಪಾಪಿಗಳು: ರೈಲ್ವೆ ಸೇತುವೆ ಬಳಿ ಪತ್ತೆ

ಜೈಲಿನಲ್ಲಿರುವ ಮಾಜಿ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್‌ಗೆ ಸುಪ್ರೀಂನಿಂದ ಕೊನೆಗೂ ಬಿಗ್‌ ರಿಲೀಫ್‌

ಮುಂದಿನ ಸುದ್ದಿ
Show comments