Select Your Language

Notifications

webdunia
webdunia
webdunia
webdunia

ವಿಚಾರವಾದಿಗಳ ಹತ್ಯೆ ತೀವ್ರ ಖಂಡನೀಯ: ಸಲ್ಮಾನ್ ಖುರ್ಷಿದ್

ವಿಚಾರವಾದಿಗಳ ಹತ್ಯೆ ತೀವ್ರ ಖಂಡನೀಯ: ಸಲ್ಮಾನ್ ಖುರ್ಷಿದ್
ಧಾರವಾಡ , ಶುಕ್ರವಾರ, 8 ಸೆಪ್ಟಂಬರ್ 2017 (18:45 IST)
ಒಬ್ಬರ ನಂತರ ಒಬ್ಬರ ವಿಚಾರವಾದಿಗಳ ಹತ್ಯೆಯಾಗುತ್ತಿರುವುದು ತೀವ್ರ ಖಂಡನೀಯ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ವಿಚಾರವಾದಿಗಳ ಹತ್ಯೆಯಾಗಿ ದೇಶದಲ್ಲಿ ಕೆಟ್ಟ ವಾತಾವರಣ ಸೃಷ್ಟಿಯಾಗುತ್ತಿದೆ. ಬಿಜೆಪಿ ಸರಕಾರ ಕೇಂದ್ರದಲ್ಲಿ ಅಸ್ಥಿತ್ವಕ್ಕೆ ಬಂದ ನಂತರ ವಿಚಾರವಾದಿಗಳ ಮೇಲೆ ದಾಳಿಗಳಲ್ಲಿ ಹೆಚ್ಚಳವಾಗಿದೆ ಎಂದು ಆರೋಪಿಸಿದರು.
 
ವಿಚಾರವಾದಿಗಳ ಹತ್ಯೆಯಲ್ಲಿ ಪರ ವಿರೋಧ ಟೀಕೆಗಳಾಗುತ್ತಿರುವುದಕ್ಕೆ ತಮ್ಮ ಆಕ್ಷೇಪವಿದೆಯ ಹಿಂಸೆ ಸಮಸ್ಯೆಗೆ ಪರಿಹಾರವಲ್ಲ. ಹಿಂಸೆಯಿಂದ ಏನನ್ನು ಸಾಧಿಸಲಾಗದು ಎಂದರು.
 
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು ಶೀಘ್ರವೇ ಗೌರಿ ಲಂಕೇಶ್ ಹಂತಕರನ್ನು ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಓಲೈಕೆಗೆ ಮುಂದಾದ ಸಿಎಂ ಯೋಗಿ