Select Your Language

Notifications

webdunia
webdunia
webdunia
webdunia

ಅಧಿಕಾರಕ್ಕೇರುವವರೆಗೆ ಗಡ್ಡ ಬೋಳಿಸಲಾರೆ: 'ಕೈ' ನಾಯಕನ ಪ್ರತಿಜ್ಞೆ

ಅಧಿಕಾರಕ್ಕೇರುವವರೆಗೆ ಗಡ್ಡ ಬೋಳಿಸಲಾರೆ: 'ಕೈ' ನಾಯಕನ ಪ್ರತಿಜ್ಞೆ
ಹೈದರಾಬಾದ್ , ಮಂಗಳವಾರ, 25 ಅಕ್ಟೋಬರ್ 2016 (18:33 IST)
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾದ ಗದ್ದುಗೆಗೆ ಏರುವವರೆಗೆ ಗಡ್ಡ ಬೋಳಿಸುವುದಿಲ್ಲವೆಂದು ತೆಲಂಗಾಣ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಎನ್. ಉತ್ತಮ್ ಕುಮಾರ್ ರೆಡ್ಡಿ ಪ್ರತಿಜ್ಞೆಗೈದಿದ್ದಾರೆ. 

ವಾಯುಸೇನೆಯ ಉನ್ನತ ಅಧಿಕಾರಿಯಾಗಿದ್ದ ನೀವು ಸದಾ ಶೇವ್ ಮಾಡಿಕೊಂಡು ಟ್ರಿಮ್ ಆಗಿರುತ್ತಿದ್ರಿ, ಮತ್ತೆ ಈಗ್ಯಾಕೆ ಹೀಗೆ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕೈ ಅಧಿಕಾರಕ್ಕೇರುವವರೆಗೆ ನಾನು ಗಡ್ಡ ಕತ್ತರಿಸುವುದಿಲ್ಲ ಎಂದಿದ್ದಾರೆ. 
 
"ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೇರುವುದು ನಿಶ್ಚಿತ. ಅಲ್ಲಿಯವರೆಗೂ ನಾನು ಗಡ್ಡ ಬೋಳಿಸುವುದಿಲ್ಲ ಇದು (ಬೆಳೆಯುತ್ತಿರುವ ಗಡ್ಡ) ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ,"  ಎನ್ನುತ್ತಾರೆ ಉತ್ತರ್ ಕುಮಾರ್ ರೆಡ್ಡಿ.
 
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಮಕಾಡೆ ಮಲಗಿತ್ತು. 119 ಸ್ಥಾನಗಳಲ್ಲಿ ಕೇವಲ 21 ಸ್ಥಾನಗಳನ್ನಷ್ಟೇ ಗೆಲ್ಲಲು ಕಾಂಗ್ರೆಸ್ ಸಫಲವಾಗಿತ್ತು. ಉತ್ತಮ್ ಕುಮಾರ್ ರೆಡ್ಡಿ ನಲ್ಗೊಂಡಾ ಜಿಲ್ಲೆಯಿಂದ ಆಯ್ಕೆಯಾಗಿದ್ದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮ, ದೀಪಾವಳಿ ಪಾಕಿಸ್ತಾನದೊಂದಿಗೆ ಆಚರಿಸುತ್ತಿದ್ದೇನೆ: ಹುತಾತ್ಮನಾಗುವ ಮುನ್ನ ತಾಯಿಗೆ ಹೇಳಿದ ಸೈನಿಕ